ಕೊಕ್ಕಡ: ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ

Suddi Udaya

ಕೊಕ್ಕಡ : ಅರಣ್ಯ ಇಲಾಖೆ ವತಿಯಿಂದ ಕೊಕ್ಕಡ ಗ್ರಾಮದ ಪೂವಾಜೆ ಬಳಿ ಅಮುಂಜಾದಲ್ಲಿ ಗಿಡಗಳ ನಾಟಿ ಮಾಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.

ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ಯೋಗೀಶ್ ಆಳಂಬಿಲರವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕೊಕ್ಕಡ ಪಂಚಾಯತ್ ಸದಸ್ಯರುಗಳಾದ ವಿಶ್ವನಾಥ್ ಕಕ್ಕುದೋಳಿ, ಶ್ರೀಮತಿ ವನಜಾಕ್ಷಿ, ಸೌತಡ್ಕ ಮಹಾಗಣಪತಿ ವ್ಯವಸ್ಥಾಪನ ಸಮಿತಿ ಸದಸ್ಯರು ಪುರಂದರ್ ಕಡೀರ, ಅರಣ್ಯ ಇಲಾಖೆ ಉಪವಲಯ ಅರಣ್ಯಧಿಕಾರಿ ಅಶೋಕ್., ಗಸ್ತು ವನಪಾಲಕ ಪ್ರಶಾಂತ್ ಮಾಳಾಗಿ, ರಾಜೇಶ್, ಅರಣ್ಯ ವೀಕ್ಷಕ ದಾಮೋದರ್ ಮತ್ತು ದಿನೇಶ್ ಉಪಸ್ಥಿತರಿದ್ದರು.

Leave a Comment

error: Content is protected !!