ಮುಂಡಾಜೆ ಪ್ರಾ.ಕೃ.ಪ. ಸಹಕಾರಿ ಸಂಘಕ್ಕೆ ನಬಾರ್ಡ್‌ ಅಧಿಕಾರಿಗಳ ಜೊತೆ ವಿವಿಧ ರಾಜ್ಯಗಳ ಸಹಕಾರಿ ಸಂಘಗಳ ಅಧಿಕಾರಿಗಳ ಭೇಟಿ

Suddi Udaya

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಬಾರ್ಡ್‌ ಅಧಿಕಾರಿಗಳ ಜೊತೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಚತ್ತೀಸ್ ಘಡ ಸಹಕಾರಿ ಬ್ಯಾಂಕುಗಳ ಪ್ರತಿನಿಧಿಗಳು ಇತ್ತೀಚೆಗೆ ಭೇಟಿ ನೀಡಿದರು.

ಸಂಘದ ವ್ಯವಹಾರ ವಿವಿಧ ಚಟುವಟಿಕೆಗಳನ್ನು, ಗಮನಿಸಿ ಸಂತಸ ವ್ಯಕ್ತಪಡಿಸಿದರು. ಮುಂಡಾಜೆ ಪಾಕ್ಸ ನಬಾರ್ಡನಿಂದ ಎಂಎಸ್ಸಿ ಯೋಜನೆಯಡಿ ನೀಡಿರುವ ಗೋದಾಮು ಕಟ್ಟಡವನ್ನು ಪರಿಶೀಲಿಸಿ, ಇಲ್ಲಿ ಸಂಘ ನಡೆಸುತ್ತಿರುವ ಕೃಷಿ ಯಂತ್ರೋಪಕರಣ ಮಳಿಗೆಯನ್ನು ವೀಕ್ಷಿಸಿದರು.

ಸಂಘದ ಅಧ್ಯಕ್ಷ ಜನಾರ್ದನ ಗೌಡ, ನಿರ್ದೇಶಕ ಶ್ರೀ ರಾಘವ ಮತ್ತು ವೃತ್ತಿಪರ ನಿರ್ದೆಶಕ ಗಜಾನನ ವಝೆ ಸಂಘದ ಕುರಿತು ಮಾಹಿತಿ ನೀಡಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಪ್ರಭು ಸ್ವಾಗತಿಸಿ, ಶಾಖಾ ವ್ಯವಸ್ಥಾಪಕ ಪ್ರಸನ್ನ ಪರಾಂಜಪೆ ವಂದಿಸಿದರು. ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ ಕಾರ್ಯಕ್ರಮ ನಿರ್ವಹಿಸಿದರು. ನಬಾರ್ಡ್ ಸಂಸ್ಥೆಯ ಶೀಲಾ ಎಂ. ಭಂಡಾರ್ಕರ್ ತಂಡದ ನೇತ್ರತ್ವ ವಹಿಸಿದ್ದರು.

Leave a Comment

error: Content is protected !!