ನಾರಾವಿ: ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ನಾರಾವಿ. ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ಜೂ.೨೩ರಂದು ನಾರಾವಿಯ ರಕ್ತಪರೀಕ್ಷಾ ಕೇಂದ್ರದ ಮಾಲಕಿ ಶ್ರೀಮತಿ ಆಶಾ ಮತ್ತು ಅವರ ಪತಿ ಸುರೇಶ್, ಯೂನಿಯನ್ ಬ್ಯಾಂಕ್ನ ಪ್ರಬಂಧಕ ಚಂದ್ರಪ್ರಕಾಶ್ ರವರು ಜಂಟಿಯಾಗಿ ಮಕ್ಕಳಿಗೆ ನೀಡಿರುತ್ತಾರೆ. ಕಾರ್ಯಕ್ರಮದಲ್ಲಿ ನಾರಾವಿ ಸೇವಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಸುಧಾಕರ ಭಂಡಾರಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉದಯ್ ಕುಮಾರ್ ಹೆಗ್ಡೆಯವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರ. ಮುಖ್ಯ ಶಿಕ್ಷಕರಾದ ಪ್ರಭಾಕರ್ ನೆರವೇರಿಸಿದರು. ಶ್ರೀಮತಿ ಮಮತಾ ಸ್ವಾಗತಿಸಿದರು, ಶ್ರೀಮತಿ ಜ್ಞಾನೇಶ್ವರಿ ವಂದಿಸಿದರು.
previous post








