ಹೊಸಂಗಡಿ : ಹೊಸಂಗಡಿ ಗ್ರಾ.ಪಂ. ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಪಡ್ಡಂದಡ್ಕದಲ್ಲಿ ವನಮಹೋತ್ಸವವನ್ನು ಗಿಡ ನೆಡುವುದರ ಮೂಲಕ ಜು.6 ರಂದು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಕರುಣಾಕರ, ಉಪಾಧ್ಯಕ್ಷೆ ನಾಗರತ್ನ, ಸದಸ್ಯರಾದ ಪ್ರಕಾಶ್, ಜಗದೀಶ್ ಹೆಗ್ಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಆಚಾರ್ಯ , ಉಪ ಅರಣ್ಯಧಿಕಾರಿ ಇಬ್ರಾಹಿಂ, ಅರಣ್ಯ ರಕ್ಷಕ ಮಂಜು, ಅರಣ್ಯ ವೀಕ್ಷಕ ಯುವರಾಜ್, ಪಡ್ಡಂದಡ್ಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಭೀರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ, ಗ್ರಾ.ಪಂ. ಸಿಬ್ಬಂದಿಗಳು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.













