ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ನೂತನ ಸಭಾಂಗಣಕ್ಕೆ ಶಿಲಾನ್ಯಾಸ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ನೂತನ ಸಭಾಂಗಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಜು.8 ರಂದು ನೆರವೇರಿತು.
ಶ್ರೀ ಕ್ಷೇತ್ರ ಸೌತಡ್ಕದಲ್ಲಿ ಅಭಿವೃದ್ಧಿ ಕಾರ್ಯದ ಶಿಲಾನ್ಯಾಸ ಕಾರ್ಯಕ್ರಮದ ಪೂಜಾ ವಿಧಿವಿಧಾನಗಳನ್ನು ಕ್ಷೇತ್ರದ ಪ್ರಮುಖ ಅರ್ಚಕರು ಶ್ರೀ ಸತ್ಯ ಪ್ರಿಯ ಕಲ್ಲೂರಾಯರು ನೆರವೇರಿಸಿದರು.


ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ಹಾಗೂ ಕೊಕ್ಕಡ ಗ್ರಾಮ ಪಂಚಾಯತ್ ನ ಅಧ್ಯಕ್ಷರು ಯೋಗೀಶ್ ಅಲಂಬಿಲ ಇವರು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ದಾಮೋದರ್ ಶೆಟ್ಟಿ ನೂಜೆ, ವಿಠ್ಠಲ್ ಶೆಟ್ಟಿ ನೂಜೆ, ಬಾಲಕೃಷ್ಣ ನೈಮಿಷ, ವೀರಪ್ಪ ಗೌಡ ಕೇಚೋಡಿ, ಶಿವಾನಂದ ಸಂಕೇಶ, ಪಂಚಾಯತ್ ನ ಉಪಾಧ್ಯಕ್ಷರು ಶ್ರಿಮತಿ ಪವಿತ್ರ, ಶ್ರೀ ಕುಂಜಹಿಕಣ್ಣನ್, ಲಿಂಗಪ್ಪ ಕದೀರ, ರಾಘವ ಭಂಡಾರಿ, ಕೇಶವ ಹಾಲ್ಲಿಂಗೇರಿ, ಸುದರ್ಶನ್ ಕನ್ಯಾಡಿ, ಲೆಕ್ಕ ಪರಿಶೋಧಕ ಹೃಷಿಕೇಶ್, ಅವಿನಾಶ್ ಕುಲಾಲ್ ಬಳ್ಳಮಂಜ, ವ್ಯವಸ್ಥಾಪನಾ ಸಮಿತಿಯ ಸದಸ್ಯರು, ದೇವಳದ ಸಿಬ್ಬಂದಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.

Leave a Comment

error: Content is protected !!