ರಾಜ ಕೇಸರಿ ಸಂಘಟನೆಯ 541ನೇ ಸೇವಾ ಯೋಜನೆ: ಉಜಿರೆ ದೊಂಪದ ಪಲ್ಕೆ ಕೋಟಪ್ಪ ಪೂಜಾರಿಯವರಿಗೆ ಸಿಟಿ ಸ್ಕ್ಯಾನಿಂಗ್ ಮಾಡಿಸಲು ಸಹಾಯ ಹಸ್ತ

Suddi Udaya

ಬೆಳ್ತಂಗಡಿ: ರಾಜ ಕೇಸರಿ ಸಂಘಟನೆಯ 541ನೇ ಸೇವಾ ಯೋಜನೆ ಪ್ರಯುಕ್ತ ಉಜಿರೆ ಗ್ರಾಮದ ದೊಂಪದ ಪಲ್ಕೆ ನಿವಾಸಿ ಕೋಟಪ್ಪ ಪೂಜಾರಿ ಇವರಿಗೆ ಪಕ್ಷಪಾತದಿಂದ ಬಳಲುತ್ತಿದ್ದು ಇವರಿಗೆ ಯುಡಿಐಡಿ ಕಾರ್ಡ್ ಮಾಡುವ ಮುಂಚಿತವಾಗಿ ಇವರ ಹಳೆಯ ವಿಕಲಚೇತನ ಗುರುತಿನ ಚೀಟಿಯು ನವೀಕರಣ ಮಾಡುವ ಸಲುವಾಗಿ ಇವರಿಗೆ ವೈದ್ಯರು ಸಿಟಿ ಸ್ಕ್ಯಾನಿಂಗ್ ಮಾಡಲು ಹೇಳಿರುತ್ತಾರೆ ಇವರಿಗೆ ಆರ್ಥಿಕ ಸ್ಥಿತಿ ಕಷ್ಟಕರವಾದುದರಿಂದ ಸಿಟಿ ಸ್ಕ್ಯಾನಿಂಗ್ ಮಾಡಿಸಲು ರಾಜ ಕೇಸರಿ ಸಂಘಟನೆ ಸಹಾಯ ಹಸ್ತ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ ಕೇಸರಿ ಸಂಘಟನೆ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ, ರಾಜ ಕೇಸರಿ ಬೆಳ್ತಂಗಡಿ ತಾಲೂಕ ಅಧ್ಯಕ್ಷರಾದ ಸಂದೀಪ್, ರಾಜ ಕೇಸರಿ ಸಂಘಟನೆಯ ಗೌರವ ಸಲಹೆಗಾರರಾದ ಪ್ರೇಮ್ ರಾಜ್ ರೋಶನ್ ಸಿಕ್ಕೇರಾ, ಸಂಘಟನೆ ಸದಸ್ಯರಾದ ಶಶಿಕಾಂತ್ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ವಿಪುಲ್ ಪೂಜಾರಿ ಉಪಸ್ಥಿತರಿದ್ದರು.

Leave a Comment

error: Content is protected !!