25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಿಕ್ಷಣ ಸಂಸ್ಥೆ

ನಿಡ್ಲೆ ನಾಗೇಶ್ ಕುಮಾರ್ ಕೆ.ಎಂ ಅಭಿಮಾನಿ ಬಳಗದಿಂದ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಕೊಡೆ ಹಾಗೂ ಹಣ್ಣು ಹಂಪಲು ಸಸಿಗಳ ವಿತರಣೆ

ನಿಡ್ಲೆ: ನಾಗೇಶ್ ಕುಮಾರ್ ಕೆ.ಎಂ ಅಭಿಮಾನಿ ಬಳಗದ ವತಿಯಿಂದ ಸರಕಾರಿ ಪ್ರೌಢ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ನಿಡ್ಲೆ ಹಾಗೂ ಅಂಗನವಾಡಿ ಕೇಂದ್ರ ನಿಡ್ಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ ಹಾಗೂ ಇಲ್ಲಿಯ ಅಂಗನವಾಡಿ ಕೇಂದ್ರಗಳಿಗೆ ಶಾಲಾ ಪಠ್ಯಕ್ಕೆ ಉಪಯೋಗವಾಗುವಂತಹ ಪುಸ್ತಕ, ಪೆನ್, ಪೆನ್ಸಿಲ್, ಕೊಡೆ ಹಾಗೂ ಹಣ್ಣು ಹಂಪಲು ಇನ್ನಿತರ ವಸ್ತುಗಳನ್ನು ಉಚಿತವಾಗಿ ಜು.10 ರಂದು ವಿತರಿಸಲಾಯಿತು.

ಇವರು ಹತ್ತು ಹಲವಾರು ಸಮಾಜಮುಖಿ ಕಾರ್ಯಗಳ ಮೂಲಕ ತಾಲೂಕಿನ ಗಮನ ಸೆಳೆಯುತ್ತಿರುವ ನಿಡ್ಲೆ ಗ್ರಾಮದ ಯುವ ಉದ್ಯಮಿ ಕೆ.ಎಂ ನಾಗೇಶ್ ಕುಮಾರ್ ಇವರು ಶೈಕ್ಷಣಿಕ ಸಾಮಾಜಿಕ ಕಾರ್ಯಗಳ ಮುಖೇನ ಬಡವರ ಪಾಲಿನ ಆಶಾಕಿರಣವಾಗಿದ್ದಾರೆ. ಇವರು ಸ್ವಾಮೀಪ್ರಸಾದ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ಹಲವಾರು ಜನರಿಗೆ ಉದ್ಯೋಗ ನೀಡಿ, ಬಡವರ ಪಾಲಿನ ಆಶಾಕಿರಣವಾಗಿದ್ದಾರೆ.


ಈ ಸಂದರ್ಭದಲ್ಲಿ ಆಯೋಜಕರಾದ ನಾಗೇಶ್ ಕುಮಾರ್, ಬೆಸ್ಟ್ ಪೌಂಡೇಶನ್ ಇದರ ಅಧ್ಯಕ್ಷ ರಕ್ಷಿತ್ ಶಿವರಾಂ, ಸುಧಾ ನಾಗೇಶ್ ಕುಮಾರ್ ಹಾಗೂ ನಾಗೇಶ್ ಕುಮಾರ್ ಅಭಿಮಾನಿ ಬಳಗದ ಉಸ್ತುವಾರಿಗಳಾದ ಉಮೇಶ್ ಬಂಗೇರ ಕಾಪಿನಡ್ಕ, ಅಶಿಪ್ ಐಡಿಯಲ್, ಧನುಷ್ ನಿಡ್ಲೆ ,ಅಶ್ವಿನ್ ಕಿರಣ್ ,ಹರಿಶ್ಚಂದ್ರ, ಗಣೇಶ್ ಪಿಜಿನಡ್ಕ, ಅಚ್ಯುತ್ ನಾಯ್ಕ, ಉಸ್ಮಾನ್ ಲಿಯೋ ಮೊಂತೆರೋ, ಆರಿಫ್ ಶಪ್ವಾನ್ ಹಾಗೂ ಕಲಂದರ್ ಎಂ ಎಚ್ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಸಹಾಯಧನ ವಿತರಣೆ

Suddi Udaya

ಎ.7-12: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾಮಹೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವರ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಶಾಸಕ ಹರೀಶ್ ಪೂಂಜರವರ ಜನ್ಮದಿನದ ಪ್ರಯುಕ್ತ ಸಾಮಾಜಿಕ ಜಾಲತಾಣ ಸಹಸoಚಾಲಕ ಸಂದೀಪ್ ರೈ ಧರ್ಮಸ್ಥಳ ರವರಿಂದ ಕೊಕ್ಕಡದ ಎಂಡೋಸಲ್ಫಾನ್ ಪುನರ್ವಸತಿ ಕೇಂದ್ರದ ವಿಶೇಷ ಮಕ್ಕಳಿಗೆ ವಿಶೇಷ ಭೋಜನ

Suddi Udaya

ಲಾಯಿಲ: ರಸ್ತೆ ದಾಟುತ್ತಿರುವ ವೇಳೆ ಪಿಕಪ್ ಡಿಕ್ಕಿ: ಪಾರೆಂಕಿಯ ಬಾಲಕ ರಂಝಿನ್ ಸಾವು

Suddi Udaya

ಬೆಳ್ತಂಗಡಿ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಮಹಾಸಭೆ

Suddi Udaya
error: Content is protected !!