ಗೋಸಾಗಾಟ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ : ಭಾಜಪಾ. ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ಸ್ಪಷ್ಟನೆ

Suddi Udaya

ಬೆಳ್ತಂಗಡಿ: ನಿನ್ನೆ ಧರ್ಮಸ್ಥಳ ಪೊಲೀಸರು ಗೋಸಾಗಾಟವೊಂದನ್ನು ತಡೆಹಿಡಿದು, ವಾಹನಗಳನ್ನು ವಶಪಡೆಸಿಕೊಂಡ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಹಾಗೂ ಅದ್ಯಾವುದೂ ನನ್ನ ವಾಹನಗಳಾಗಿರುವುದಿಲ್ಲ ಎಂದು ಭಾಜಪಾ. ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ
ಗಣೇಶ್ ಗೌಡ ಸ್ಪಷ್ಟಪಡಿಸಿದ್ದಾರೆ.

ಸದ್ರಿ ವಿಷಯದಲ್ಲಿ ಕೆಲವೊಂದು ಜನರು ನನ್ನ ಹೆಸರನ್ನು ತಳುಕುಹಾಕಿದ್ದು ಆ ವಾಹನಗಳು ನನ್ನ ವಾಹನಗಳೆಂದು ಬಿಂಬಿಸಿ ನನ್ನ ತೇಜೋವಧೆ ಮಾಡಲು ಪ್ರಯತ್ನಿಸುತ್ತಿರುವುದು ನನಗೆ ಸಾಮಾಜಿಕ ಜಾಲತಾಣಗಳಲ್ಲಿ
ತಿಳಿದುಬಂದ ಕಾರಣ ಈ ಪತ್ರಿಕಾ ಹೇಳಿಕೆಯ ಮೂಲಕ ನನ್ನ ಸ್ಪಷ್ಟೀಕರಣ ನೀಡುತಿದ್ದೇನೆ.

ಮೇಲ್ಕಂಡ ಗೋಸಾಗಾಟ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಹಾಗೂ ಅದ್ಯಾವುದೂ ನನ್ನ ವಾಹನಗಳಾಗಿರುವುದಿಲ್ಲ.

ವಿನಾಕಾರಣ ನನ್ನ ಹಾಗೂ ನಾನು ಪ್ರತಿನಿಧಿಸುವ ಪಕ್ಷದ ಹೆಸರನ್ನು ಹಾಳು ಮಾಡಲು ಪ್ರಯತ್ನಪಡುತ್ತಿರುವವರ ವಿರುದ್ಧ ಶೀಘ್ರ ಕಾನೂನು ಮೊರೆ ಹೋಗಲಿದ್ದೇನೆ ಎಂದು ತಿಳಿಸಿದ್ದಾರೆ.

Leave a Comment

error: Content is protected !!