22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಗೋಸಾಗಾಟ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ : ಭಾಜಪಾ. ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ಸ್ಪಷ್ಟನೆ

ಬೆಳ್ತಂಗಡಿ: ನಿನ್ನೆ ಧರ್ಮಸ್ಥಳ ಪೊಲೀಸರು ಗೋಸಾಗಾಟವೊಂದನ್ನು ತಡೆಹಿಡಿದು, ವಾಹನಗಳನ್ನು ವಶಪಡೆಸಿಕೊಂಡ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಹಾಗೂ ಅದ್ಯಾವುದೂ ನನ್ನ ವಾಹನಗಳಾಗಿರುವುದಿಲ್ಲ ಎಂದು ಭಾಜಪಾ. ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ
ಗಣೇಶ್ ಗೌಡ ಸ್ಪಷ್ಟಪಡಿಸಿದ್ದಾರೆ.

ಸದ್ರಿ ವಿಷಯದಲ್ಲಿ ಕೆಲವೊಂದು ಜನರು ನನ್ನ ಹೆಸರನ್ನು ತಳುಕುಹಾಕಿದ್ದು ಆ ವಾಹನಗಳು ನನ್ನ ವಾಹನಗಳೆಂದು ಬಿಂಬಿಸಿ ನನ್ನ ತೇಜೋವಧೆ ಮಾಡಲು ಪ್ರಯತ್ನಿಸುತ್ತಿರುವುದು ನನಗೆ ಸಾಮಾಜಿಕ ಜಾಲತಾಣಗಳಲ್ಲಿ
ತಿಳಿದುಬಂದ ಕಾರಣ ಈ ಪತ್ರಿಕಾ ಹೇಳಿಕೆಯ ಮೂಲಕ ನನ್ನ ಸ್ಪಷ್ಟೀಕರಣ ನೀಡುತಿದ್ದೇನೆ.

ಮೇಲ್ಕಂಡ ಗೋಸಾಗಾಟ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಹಾಗೂ ಅದ್ಯಾವುದೂ ನನ್ನ ವಾಹನಗಳಾಗಿರುವುದಿಲ್ಲ.

ವಿನಾಕಾರಣ ನನ್ನ ಹಾಗೂ ನಾನು ಪ್ರತಿನಿಧಿಸುವ ಪಕ್ಷದ ಹೆಸರನ್ನು ಹಾಳು ಮಾಡಲು ಪ್ರಯತ್ನಪಡುತ್ತಿರುವವರ ವಿರುದ್ಧ ಶೀಘ್ರ ಕಾನೂನು ಮೊರೆ ಹೋಗಲಿದ್ದೇನೆ ಎಂದು ತಿಳಿಸಿದ್ದಾರೆ.

Related posts

ಬಂದಾರುನಲ್ಲಿ ಗುಡ್ಡ ಕುಸಿತ : ಮನೆಗೆ ಹಾನಿ

Suddi Udaya

ಬೆಳ್ತಂಗಡಿ ಎಸ್‌.ಐ.ಟಿ ಕಚೇರಿಗೆ ಹಾಜರಾದ ಜಯಂತ್.ಟಿ

Suddi Udaya

ಬಿಜೆಪಿ ತಣ್ಣೀರುಪoತ ಶಕ್ತಿಕೇಂದ್ರ ಪ್ರಮುಖ್ ಆಗಿ ಚೇತನ್ ಸುವರ್ಣ ಅಳಕ್ಕೆ ಆಯ್ಕೆ

Suddi Udaya

ಜೆಸಿಐ ಬೆಳ್ತಂಗಡಿ ಆತಿಥ್ಯದಲ್ಲಿ ಎಕ್ಸೆಲ್ ಪಿಯು ಕಾಲೇಜು ಸಹಭಾಗಿತ್ವದಲ್ಲಿ ಜೆಸಿಐ ಭಾರತದ ವಲಯ 15 ರ ಚಿಗುರು ತರಬೇತಿ ಕಾರ್ಯಾಗಾರ

Suddi Udaya

ಕುವೆಟ್ಟು ಗ್ರಾಮ ಪಂಚಾಯತ್ ಗ್ರಾಮ ಸಭೆಯಲ್ಲಿ ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ರಕ್ತೇಶ್ವರಿ ಗುಡಿ, ಶ್ರೀ ನಾಗದೇವರ ಕಟ್ಟೆ, ಹಾಗೂ ಶ್ರೀ ಪಂಜುರ್ಲಿ ದೈವದ ಕಟ್ಟೆಗಳಿಗೆ ಶಿಲಾನ್ಯಾಸ ಕಾರ್ಯಕ್ರಮ

Suddi Udaya
error: Content is protected !!