ಬೆನಕ ಆಸ್ಪತ್ರೆಯಲ್ಲಿ ನೂತನ ಆವಿಷ್ಕಾರದ ಕ್ಷ-ಕಿರಣ ಯಂತ್ರ ಉದ್ಘಾಟನೆ

Suddi Udaya

ಉಜಿರೆ: ಎನ್.ಎ.ಬಿ.ಎಚ್. ಪುರಸ್ಕೃತ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಹೊಸ ಆವಿಷ್ಕಾರದ ಬಿಪಿಎಲ್ ಕಂಪನಿಯ D.R.-1 Prime ಮಾದರಿಯ ಕ್ಷ-ಕಿರಣ(X-Ray) ಯಂತ್ರವನ್ನು ಜು.14 ರಂದು ದ.ಕ ಜಿಲ್ಲೆಯ ಪ್ರಖ್ಯಾತ ಹೃದ್ರೋಗ ತಜ್ಞರಾದ ಡಾ. ಪದ್ಮನಾಭ ಕಾಮತ್ ರವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ದ.ಕ ಜಿಲ್ಲೆಯ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಇಂಥ ಅತ್ಯುತ್ತಮವಾದ ನೂತನ ಆವಿಷ್ಕಾರದ ಯಂತ್ರವನ್ನು ನೋಡಬಹುದಾಗಿದೆ. ಈ ಕ್ಷ-ಕಿರಣ ಯಂತ್ರವು ಎಲುಬುಗಳ ಸೂಕ್ಷ್ಮತಿಸೂಕ್ಷ್ಮ ಬಿರುಕುಗಳನ್ನು ಕೂಡ ಗುರುತಿಸುವ ಸಾಮರ್ಥ್ಯ ಹೊಂದಿದ್ದು, ಅವಶ್ಯಕತೆ ಇರುವ ರೋಗಿಗಳ ಚಿಕಿತ್ಸೆಗೆ ತುಂಬಾ ಅನುಕೂಲವಾಗುತ್ತದೆಂದು ಡಾ.ಕಾಮತ್ ರವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಉಜಿರೆಯಂತ ಹಳ್ಳಿಯ ಈ ಆಸ್ಪತ್ರೆಯಲ್ಲಿ ಇಂತಹ ನೂತನ ಆವಿಷ್ಕಾರದ ಯಂತ್ರವನ್ನು ಅಳವಡಿಸಿದ್ದಕ್ಕಾಗಿ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಗೋಪಾಲಕೃಷ್ಣ ರವರನ್ನು ಅಭಿನಂದಿಸಿದರು.
ಡಾ. ಭಾರತೀಯವರು ಹೂಗುಚ್ಛ ನೀಡಿ ಡಾ.ಕಾಮತ್ ರವರನ್ನು ಸ್ವಾಗತಿಸಿದರು. ಡಾ.ಗೋಪಾಲಕೃಷ್ಣರವರು ನೆನಪಿನ ಕಾಣಿಕೆಯನ್ನು ನೀಡುವ ಮೂಲಕ ಡಾ.ಕಾಮತ್ ರವರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಬೆನಕ ಆಸ್ಪತ್ರೆಯ ಎಲುಬು, ಕೀಲು ತಜ್ಞರಾದ ಡಾ.ರಜತ್ ಹೆಚ್.ಪಿ ಮತ್ತು ಸ್ತ್ತ್ರೀರೋಗ ತಜ್ಞರಾದ ಡಾ. ಅಂಕಿತ ಜಿ.ಭಟ್ ರವರು ಉಪಸ್ಥಿತರಿದ್ದರು. ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ರೋಗಿಗಳು, ಅವರ ಸಂಬಂಧಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿB.P.L ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Comment

error: Content is protected !!