ಪುಂಜಾಲಕಟ್ಟೆ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ: ಅಧ್ಯಕ್ಷರಾಗಿ ಚಿದಾನಂದ ಮಾಣಿಂಜ ಆಯ್ಕೆ

Suddi Udaya

ಪುಂಜಾಲಕಟ್ಟೆ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪುಂಜಾಲಕಟ್ಟೆ ಇದರ ವತಿಯಿಂದ ಪ್ರಥಮ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಸಲುವಾಗಿ ಜು.15 ರಂದು ನೂತನ ಸಮಿತಿಯನ್ನು ರಚಿಸಲಾಯಿತು

ನೂತನ ಸಮಿತಿಯ ಅಧ್ಯಕ್ಷರಾಗಿ ಚಿದಾನಂದ ಮಾಣಿಂಜ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಅನಿಲಡೆ, ಗೌರವಾಧ್ಯಕ್ಷರಾಗಿ ಎಮ್. ತುಂಗಪ್ಪ ಬಂಗೇರ ಮತ್ತು ಸರ್ವೋತ್ತಮ ಪ್ರಭು ಪುಂಜಾಲಕಟ್ಟೆ, ಉಪಾಧ್ಯಕ್ಷರಾಗಿ ಸಂಜೀವ ಶೆಟ್ಟಿ ಸೋಣಂದೂರು ,ರಮಾನಂದ ಎಮ್. ಮೂರ್ಜೆ ಗುತ್ತು, ಗಿರೀಶ್ ಅನಿಲಡೆ, ಕಾರ್ಯದರ್ಶಿಯಾಗಿ ಹರಿಶ್ಚಂದ್ರ ಶೆಟ್ಟಗಾರ್ ಮತ್ತು ಹರೀಶ್ ಪ್ರಭು , ಜೊತೆ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿಗಾರ್ ಅತ್ತಾಜೆ‌.
ಸಮಿತಿಯ ಗೌರವ ಸಲಹೆಗಾರರಾಗಿ ರಮೇಶ್ ಶೆಟ್ಟಿ ಮಜಲೋಡಿ , ತಾರಾನಾಥ್ ಕಜೆಕಾರ್, ಸ್ವಸ್ತಿಕ್ ಗೌಡ ಹಟ್ಟತೊಡಿ, ಕೋಶಾಧಿಕಾರಿಯಾಗಿ ಕೌಶಿಕ್ ಶೆಟ್ಟಿ ಕಾಡಿಮಾರು‌ ಲೆಕ್ಕ ಪರಿಶೋಧಕರಾಗಿ ಉದಯಕುಮಾರ್ ಶೆಟ್ಟಿ ಮೆಲ್ಮನೆ, ಪ್ರಧಾನ ಅರ್ಚಕರು ಗೋವಿಂದ ಭಟ್ ಇವರನ್ನು ಆಯ್ಕೆ ಮಾಡಲಾಯಿತು ಹಾಗೂ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು.
ನೂತನ ಸಮಿತಿಗೆ ಜಿಲ್ಲಾ ಪಂಚಾಯಿತ್ ಉಪಾಧ್ಯಕ್ಷರಾದ ಎಮ್. ತುಂಗಪ್ಪ ಬಂಗೇರ ರವರು ಶುಭ ಹಾರೈಸಿದರು
ಹರೀಶ್ ಪ್ರಭು ಸ್ವಾಗತಿಸಿ, ವಂದಿಸಿದರು.

Leave a Comment

error: Content is protected !!