ಕೊಕ್ಕಡ ಕಪಿಲಾ ಜೇಸಿಗೆ ವಲಯ ಉಪಾಧ್ಯಕ್ಷರ ಭೇಟಿ

Suddi Udaya

ಕೊಕ್ಕಡ: ಕೊಕ್ಕಡ ಕಪಿಲಾ ಜೇಸಿಗೆ ವಲಯ 15 ಪ್ರಾಂತ್ಯ ಸಿ. ಇದರ ಉಪಾಧ್ಯಕ್ಷರ ಅಧಿಕೃತ
ಭೇಟಿ ಕಾರ್ಯಕ್ರಮ ಜುಲೈ 16 ರಂದು ನಡೆಯಿತು.

ವಲಯ ಉಪಾಧ್ಯಕ್ಷರಾದ ಭರತ್ ಶೆಟ್ಟಿ ಅವರು ಎಲ್. ಎ. ವಿ. ಎಂಬ ತರಬೇತಿ ನೀಡಿದರು.

ಕೊಕ್ಕಡ ಕಪಿಲಾ ಜೇಸಿ ಘಟಕಾಧ್ಯಕ್ಷರಾದ ಜಿತೇಶ್ ಎಲ್ ಪಿರೇರಾ ಅಧ್ಯಕ್ಷತೆ ವಹಿಸಿದ್ದರು.

ಮಹಿಳಾ ಜೇಸಿ ವಿಭಾಗ ಮುಖ್ಯಸ್ಥರಾದ ದೀಪಾ ವಿ. ಜೇಸಿ ವಾಣಿ ವಾಚಿಸಿದರು. ಕೋಶಾಧಿಕಾರಿ ಜಸ್ವಂತ್ ಪಿರೇರಾ ಅವರು ಅತಿಥಿಗಳ ಪರಿಚಯ ಮಾಡಿದರು.

ಇದೇ ವರ್ಷ ಜೆ.ಎಫ್.ಎಂ. ಪುರಸ್ಕಾರ ಗಳಿಸಿದ ಕೆ. ಶ್ರೀಧರ್ ರಾವ್ ಹಾಗೂ ಹೆಚ್. ಜಿ.ಎಫ್. ಫೆಲೋಶಿಪ್ ಪಡೆದ ಜೆಸಿಂತಾ ಡಿ ಸೋಜ ಅವರಿಗೆ ಪಿನ್ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಜೋಯ್ ಬೊತೇಲೊ ಹಾಗೂ ಪ್ರಕಾಶ್ ಬೊತೇಲೊ ಅವರನ್ನು ಜೇಸಿಯ ಪ್ರಮಾಣ ವಚನ ನೀಡಿ ಜೇಸಿ ಅಧಿಕಾರಿಗಳು ಸ್ವಾಗತಿಸಿದರು.

ಜಸ್ವಂತ್, ಶ್ರೀಧರ್ ರಾವ್ ಹಾಗೂ ಜೋಯಿ ಅವರು ತರಬೇತಿ ಕುರಿತು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಜೋಸೆಫ್ ಪಿರೇರಾ ಅವರು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಕಾರ್ಯದರ್ಶಿ ವಿಕ್ಟರ್ ಸುವಾರಿಸ್ ವಂದಿಸಿದರು.

Leave a Comment

error: Content is protected !!