ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ತೀರ್ಥಸ್ನಾನ 

Suddi Udaya

 

ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ಜು. 17ರಂದು ದೇವಸ್ಥಾನದ  ಅನುವಂಶಿಕ ಆಡಳಿತ  ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ ಅರ್ಚಕ  ವೇದಮೂರ್ತಿ ರಾಮಚಂದ್ರ ಹೊಳ್ಳರ  ಉಪಸ್ಥಿತಿಯಲ್ಲಿ ಸುಮಾರು 2000ಕ್ಕೂ ಮಿಕ್ಕಿ ಭಕ್ತಾದಿಗಳು  ತೀರ್ಥಸ್ನಾನ ಪೂರೈಸಿದರು.

ಶಾಲೆ,ಕಾಲೇಜು,ಹಾಸ್ಟೆಲುಗಳ  ವಿದ್ಯಾರ್ಥಿಗಳು,ಪರಿಸರದ ಸಾರ್ವಜನಿಕ ಭಕ್ತಾದಿಗಳು ಶ್ರೀ ದೇವರ ದರ್ಶನ ಪಡೆದು,ಸೇವೆ ಸಲ್ಲಿಸಿ,ಪ್ರ ಸಾದ ಸ್ವೀಕರಿಸಿದರು. ಮಧ್ಯಾಹ್ನದವರೆಗೂ ಭಕ್ತರು ಸರತಿಯ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆದರು .

Leave a Comment

error: Content is protected !!