ಉಜಿರೆ: ದ.ಕ.ಜಿ.ಪ.ಕಿ ಪ್ರಾ ಜನಾರ್ಧನ ಶಾಲೆಯಲ್ಲಿ ಪರಿಸರ ಕಾರ್ಯಕ್ರಮ, ಹಣ್ಣಿನ ಗಿಡ ನಾಟಿ

Suddi Udaya

*ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು ಇದರ ವತಿಯಿಂದ, ಶೌರ್ಯ ಘಟಕ, ಪ್ರಗತಿ ಬಂದು ಒಕ್ಕೂಟ ಹಾಗೂ ಅರಣ್ಯ ಇಲಾಖೆಯ ಸಹಕಾರದೊಂದಿಗೆ ದ.ಕ.ಜಿ.ಪ.ಕಿ .ಪ್ರಾ ಜನಾರ್ಧನ ಶಾಲೆ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು. ಶೌರ್ಯ ತಂಡದ ಸ್ವಯಂ ಸೇವಕರಾದ ಸಚಿನ್ ಬಿಡೆ, ರವೀಂದ್ರ, ಸಂತೋಷ್ ಉಜಿರೆ, ಸುಧೀರ್, ಶಿವ ಕುಮಾರ್, ರಾಘವೇಂದ್ರ ನಾಯ್ಕ್ ಇವರು ಭಾಗವಹಿಸಿದರು

ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯರು ಬಾಲಕೃಷ್ಣ ಹಾಗೂ ಸಹ ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿಜಯ ಗೌಡ, ಸದಸ್ಯರಾದ ಶೀಲಾವತಿ, ಒಕ್ಕೂಟದ ಪದಾಧಿಕಾರಿಗಳು ವಲಯ ಮೇಲ್ವಿಚಾರಕರಾದ ಶ್ರೀಮತಿ ವನಿತಾ, ಸೇವಾ ಪ್ರತಿನಿಧಿ ಶೌರ್ಯ ತಂಡದ ಸಂಯೋಜಕಿ ಶ್ರೀಮತಿ ಆಶಾ, ಉಜಿರೆಯ ಸೇವಾಪ್ರತಿನಿಧಿಗಳಾದ ಪ್ರೇಮಲತಾ, ಸೌಮ್ಯ, ಜಯಂತಿ ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದು ಗಿಡನಾಟಿಯನ್ನು ಮಾಡಿದರು.

Leave a Comment

error: Content is protected !!