July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳ  ಶ್ರೀ ಮಂ.ಸ್ವಾ. ಅ.ಹಿ. ಪ್ರಾ. ಶಾಲೆಯಲ್ಲಿ ‘ಆಟಿಡೊಂಜಿ ದಿನ ‘

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತುಳುನಾಡಿನ ವಿಶೇಷ ತಿಂಗಳಾದ ಆಟಿ ತಿಂಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಸಲುವಾಗಿ ‘ಆಟಿಡೊಂಜಿ ದಿನ ‘ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಲ್ಮoಜ ಗ್ರಾಮದ ಶ್ರೀಮತಿ ಜಾನಕಿ ಇವರು ಆಗಮಿಸಿದರು. ಇವರು ಆಟಿ ತಿಂಗಳಲ್ಲಿ ಪ್ರತೀ ದಿನವೂ ಮಹತ್ವದ್ದಾಗಿದೆ. ಆಟಿ ಅಮಾವಾಸ್ಯೆಯ ದಿನದಂದು ಹಾಲೆ ಮರದ ಕಷಾಯ ಕುಡಿಯುವುದು ಯಾಕೆಂದರೆ ಆ ಮರದಲ್ಲಿ ಮೂರು ದೇವತೆಗಳ ವಾಸವಿರುತ್ತದೆ. ಆ ಕಷಾಯವನ್ನು ಕುಡಿಯುವುದರಿಂದ ಆ ದೇವತೆ ಗಳ ಅನುಗ್ರಹ ನಮಗೆ ಸಿಗುತ್ತದೆ. ಈ ತಿಂಗಳಲ್ಲಿ ಸಿಗುವ ಕೆಸು, ತಜಂಕ್ ಸೊಪ್ಪು, ತಿಮರೆ ಸೊಪ್ಪು,ಕಣಿಲೆಗಳಿಂದ ತಯಾರಿಸಿದ ತಿಂಡಿಗಳನ್ನು ತಿನ್ನಬೇಕು. ಹಿಂದಿನ ಕಾಲದಲ್ಲಿ ಬಡತನ ಇತ್ತು. ನಮ್ಮ ಸುತ್ತಮುತ್ತ ಸಿಗುವ ಹಲಸಿನಕಾಯಿ ಬೀಜವನ್ನು ತಿನ್ನುವುದು, ಹಪ್ಪಳ ತಿನ್ನುವುದು, ಸೊಪ್ಪು ಗಳನ್ನು ತಿನ್ನುವುದು, ಮಾವಿನಕಾಯಿ ಕೆತ್ತೆ ಗಳನ್ನು ಒಣಗಿಸಿ ತಿನ್ನುವುದು ರೂಢಿಯಲ್ಲಿತ್ತು. ಆದರೆ ಈಗ ಕಾಲ ಬದಲಾಗಿದೆ. ಬಡತನದ ಅರಿವು ಈಗಿನ ಮಕ್ಕಳಿಗೆ ಇಲ್ಲ. ಆದ್ದರಿಂದ ಇಂತಹ ಕಾರ್ಯಕ್ರಮ ಗಳನ್ನು ಮಾಡುವುದರ ಮೂಲಕ ತಿಂಗಳ ವಿಶೇಷತೆಯನ್ನು ತಿಳಿಯುವಂತೆ ಮಾಡುತ್ತಿರುವುದು ಅಭಿನಂದನೀಯ ಎನ್ನುತ್ತಾ ತುಳು ಪದ್ಯವಾದ” ತಿತ್ತೀರಿ ಮಜಲ್ ಡ್ ಪಂತಿ ನಲಿಪುಂಡು”ಎಂಬ ಹಾಡನ್ನು ಹಾಡಿಸಿ ಮಕ್ಕಳನ್ನು ರಂಜಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಶಾಲೆಯ ಮುಖ್ಯ ಗುರುಗಳಾದ ಸುಬ್ರಹ್ಮಣ್ಯ ರಾವ್ ಇವರು ಕಾರ್ಯಕ್ರಮದ ಉದ್ದೇಶ ನಮ್ಮ ಹಿಂದಿನ ಕಾಲದ ವಿಚಾರಗಳನ್ನು ತಿಳಿಯುವುದಾಗಿದೆ. ಅದೇ ರೀತಿ ಈ ತಿಂಗಳಲ್ಲಿ ಆಡುವ ಚೆನ್ನೆಮಣೆ ಆಟದ ಬಗ್ಗೆ ಮಾಹಿತಿಯನ್ನು ನೀಡಿದರು.
ಶಾಲೆಯ ಮಕ್ಕಳು ಮನೆಯಿಂದ ತಯಾರಿಸಿಕೊಂಡು ಬಂದ ತಿಂಡಿ ತಿನಿಸುಗಳ ಪ್ರದರ್ಶನ ನಡೆಯಿತು.

ಕಾರ್ಯಕ್ರಮವು ತುಳು ಭಾಷೆಯಲ್ಲಿಯೇ ನಡೆದದ್ದು ತುಂಬಾ ವಿಶೇಷವಾಗಿತ್ತು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ, ಶಿಕ್ಷಕಿ ಶ್ರೀಮತಿ ಗಿರಿಜಾ ಇವರು ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಉಷಾರವರು ಧನ್ಯವಾದವಿತ್ತರು. 
 ಕಾರ್ಯಕ್ರಮವನ್ನು ಹಿರಿಯ ಶಿಕ್ಷಕಿ ಶ್ರೀಮತಿ ಶ್ರೀಜಾ ನಿರೂಪಿಸಿದರು. ಶಾಲೆಯ ಎಲ್ಲಾ ಶಿಕ್ಷಕ ವೃಂದ ದವರು ಸಹಕರಿಸಿದರು.

Related posts

ಬೆಳ್ತಂಗಡಿ: ಶ್ರೀ ಧ.ಮಂ.ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಗೆ ಕುಷ್ಟರೋಗದ ನಿರ್ಮೂಲನೆ , ಕುಷ್ಟ ರೋಗವನ್ನು ಪತ್ತೆ ಹಚ್ಚುವ ಜಾಗೃತಿಯ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya

ಪರಾಮರ್ಶೆ ಸಮಿತಿಯ ಮುಖ್ಯಸ್ಥ ಮಾಜಿ ರಾಜ್ಯಸಭಾ ಸದಸ್ಯರಾದ ಬಿ ಇಬ್ರಾಹಿಂರಿಗೆ ಅಗೌರವ: ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ನಗರ ಮತ್ತು ಗ್ರಾಮೀಣ ಘಟಕದ ಖಂಡನೆ : ಆರೋಪಿತರ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ

Suddi Udaya

ಸಿಯೋನ್ ಆಶ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

Suddi Udaya

ಪುತ್ತೂರು: ಸಹಾಯಕ ಆಯುಕ್ತ ಗಿರೀಶ್ ನಂದನ್ ವರ್ಗಾವಣೆ: ನೂತನ ಆಯುಕ್ತರಾಗಿ ಮಹೇಶ್ ಚಂದ್ರ ನೇಮಕ

Suddi Udaya

ಇಳಂತಿಲ ಅಂಡೆತಡ್ಕ ಮನೆ ನಿವಾಸಿ ಅರುಣ್ ನಾಪತ್ತೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಗುರುಪೂರ್ಣಿಮಾ ಆಚರಣೆ

Suddi Udaya
error: Content is protected !!