July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹೊಸಂಗಡಿ: ಗಾಳಿ ಮಳೆಗೆ 5 ಮನೆಗಳಿಗೆ ಹಾನಿ : ಸ್ಥಳಕ್ಕೆ ಪಂಚಾಯತು, ಕಂದಾಯ ಅಧಿಕಾರಿಗಳ ಭೇಟಿ

ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಕೋಡಿ ಗ್ರಾಮದ ಹಲವೆಡೆ ಇಂದು ಸುರಿದ ಬಾರೀ ಗಾಳಿ ಮನೆಗೆ 5 ಮನೆಗಳು ಮತ್ತು ಆಸ್ತಿ ಪಾಸ್ತಿಗೆ ಹಾನಿಯುಂಟಾಗಿದೆ.

ಕಂಬಳದಡ್ಡ ನಿವಾಸಿ ಸುಂದರ ಕೆ, ಪ್ರೇಮ ಪೂವಪ್ಪ, ಜಯಶ್ರೀ ಜೈನ್, ಲೋಕಯ್ಯ ಇವರ ಮನೆಗಳ ಶೀಟ್, ಹೆಂಚು ಗಾಳಿಗೆ ಹಾರಿ ಹೋಗಿವೆ, ಬೂಬ ರವರ ಹಟ್ಟಿ ಗಾಳಿಗೆ ಹಾನಿಉಂಟಾಗಿದ್ದು, ಜಯಶ್ರೀ ಜೈನ್ ಇವರ ಪಂಪು ಶೆಡ್ಡಿನ ಶೀಟ್ ಹಾರಿ ಹೋಗಿದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ದರಾಶಯಿ ಆಗಿವೆ. ಹಲವೆಡೆ ಅಡಿಕೆ ಮರಗಳು ಮತ್ತು ಇನ್ನಿತರ ಮರಗಳು ನೆಲಕ್ಕುರುಳಿವೆ.


ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು, ಪಿ ಡಿ ಒ ಮತ್ತು ಗ್ರಾಮ ಕರಣಿಕರು ಸ್ಥಳಕ್ಕೆ ತಕ್ಷಣ ಭೇಟಿ ನೀಡಿ ಪರಿಶೀಲಿಸಿದರು.

Related posts

ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯ : ಇಬ್ಬರು ವಿದ್ಯಾರ್ಥಿಗಳು Quest Global ಸಂಸ್ಥೆಯ ವಿದ್ಯಾರ್ಥಿ ವೇತನಕ್ಕೆ ಆಯ್ಕೆ

Suddi Udaya

ಸೌದಿ ಅರೇಬಿಯಾದಲ್ಲಿ ಬಿಲ್ಲವ ಅಸೋಸಿಯೇಶನ್ ಸಮಿತಿ ರಚನೆ : ಅಧ್ಯಕ್ಷರಾಗಿ ಕಿಶೋರ್ ಪೂಜಾರಿ, ಪ್ರ. ಕಾರ್ಯದರ್ಶಿಯಾಗಿ ಜಯಕರ ಎಂ. ಪೂಜಾರಿ

Suddi Udaya

ದಿ| ಗಿರಿಜ ಕೋಂಗುಜೆ ಯವರ ಉತ್ತರ ಕ್ರಿಯೆ ಕಾರ್ಯಕ್ರಮ

Suddi Udaya

ವಾಯುಭಾರ ಕುಸಿತ: ತಾಲೂಕಿನದ್ಯಾಂತ ವ್ಯಾಪಕ ಮಳೆ-ರೆಡ್ ಅಲರ್ಟ್; ಮುಂಡಾಜೆಯಲ್ಲಿ103 ಮಿ.ಮೀ.ಮಳೆ

Suddi Udaya

ಜೋಯಾಲುಕ್ಕಾಸ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಮನೆ ಹಸ್ತಾಂತರ

Suddi Udaya

ಜ.14: ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಯಕ್ಷೋತ್ಸವ : ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!