ವೇಣೂರು: ದಿ. ಸಂಜೀವ ಪಾಣೂರುರವರ ಶ್ರದ್ಧಾಂಜಲಿ ಸಭೆ

Suddi Udaya

ವೇಣೂರು: ಇತ್ತೀಚೆಗೆ ನಿಧನರಾದ ವೇಣೂರಿನಲ್ಲಿ ಟೈಲರ್ ವೃತ್ತಿ ನಡೆಸುತ್ತಿದ್ದ ಸಂಜೀವ ಪಾಣೂರುರವರ ಶ್ರದ್ಧಾಂಜಲಿ ಸಭೆ ಜು.23 ರಂದು ವೇಣೂರು ಗಾರ್ಡನ್ ವಿವ್ಯೂ ಕಾಂಪ್ಲೆಕ್ಸ್ ನ ಹಾಲ್ ನಲ್ಲಿ ನಡೆಯಿತು.

ಸಭೆಯಲ್ಲಿ ಮೃತರ ನೆನಪಿಗೆ ದತ್ತಿ ನಿಧಿ ದೇಣಿಗೆಯನ್ನು ಮನೆಯವರು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಮತ್ತು ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಗೆ ನೀಡಿದರು.

ಮೃತರು ಪತ್ನಿ ವಿನೋದ ಎಸ್.ಪಾಣೂರು, ಪುತ್ರಿ ಆಕೃತಿ ಪಾಣೂರು ಇವರು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಡ್ಕ, ನಿರ್ದೇಶಕ ರಮೇಶ ಪೂಜಾರಿ, ಪಡ್ಡಾಯಿಮಜಲು ಹಾಗೂ ಗುರು ಚಾರಿಟೇಬಲ್ ಟೇಸ್ಟ್ ಅಧ್ಯಕ್ಷ ಜಯಾನಂದ ರಿಗೆ ದತ್ತಿನಿಧಿ ಚೆಕ್ ಹಸ್ತಾಂತರಿಸಿದರು.

ಶಿಕ್ಷಕ ಶಶಿಧರ,ಹೆಚ್. ಮಹಮ್ಮದ್ ವೇಣೂರು, ಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಯಾನಂದ ಮೃತರ ಬಗ್ಗೆ ನುಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗಣ್ಯರು, ಹಿತೈಷಿಗಳು ಕುಟುಂಬಸ್ಥರು ಹಾಜರಿದ್ದರು

Leave a Comment

error: Content is protected !!