ಹೊಸಂಗಡಿ: ಗಾಳಿ ಮಳೆಗೆ 5 ಮನೆಗಳಿಗೆ ಹಾನಿ : ಸ್ಥಳಕ್ಕೆ ಪಂಚಾಯತು, ಕಂದಾಯ ಅಧಿಕಾರಿಗಳ ಭೇಟಿ

Suddi Udaya

ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಕೋಡಿ ಗ್ರಾಮದ ಹಲವೆಡೆ ಇಂದು ಸುರಿದ ಬಾರೀ ಗಾಳಿ ಮನೆಗೆ 5 ಮನೆಗಳು ಮತ್ತು ಆಸ್ತಿ ಪಾಸ್ತಿಗೆ ಹಾನಿಯುಂಟಾಗಿದೆ.

ಕಂಬಳದಡ್ಡ ನಿವಾಸಿ ಸುಂದರ ಕೆ, ಪ್ರೇಮ ಪೂವಪ್ಪ, ಜಯಶ್ರೀ ಜೈನ್, ಲೋಕಯ್ಯ ಇವರ ಮನೆಗಳ ಶೀಟ್, ಹೆಂಚು ಗಾಳಿಗೆ ಹಾರಿ ಹೋಗಿವೆ, ಬೂಬ ರವರ ಹಟ್ಟಿ ಗಾಳಿಗೆ ಹಾನಿಉಂಟಾಗಿದ್ದು, ಜಯಶ್ರೀ ಜೈನ್ ಇವರ ಪಂಪು ಶೆಡ್ಡಿನ ಶೀಟ್ ಹಾರಿ ಹೋಗಿದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ದರಾಶಯಿ ಆಗಿವೆ. ಹಲವೆಡೆ ಅಡಿಕೆ ಮರಗಳು ಮತ್ತು ಇನ್ನಿತರ ಮರಗಳು ನೆಲಕ್ಕುರುಳಿವೆ.


ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು, ಪಿ ಡಿ ಒ ಮತ್ತು ಗ್ರಾಮ ಕರಣಿಕರು ಸ್ಥಳಕ್ಕೆ ತಕ್ಷಣ ಭೇಟಿ ನೀಡಿ ಪರಿಶೀಲಿಸಿದರು.

Leave a Comment

error: Content is protected !!