July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೆ.ಎಸ್.ಟಿ.ಎ ವೇಣೂರು ಟೈಲರ್ಸ್ ವಲಯದ ಮಹಾಸಭೆ

ಕೆ.ಎಸ್.ಟಿ.ಎ ವೇಣೂರು ಟೈಲರ್ಸ್ ವಲಯದ ಮಹಾಸಭೆಯು ಗಾರ್ಡನ್ ವ್ಯೂ ಸಭಾ ಭವನದ ಕಾಂಪ್ಲೆಕ್ಸ್ ನಲ್ಲಿ ವಲಯ ಸಮಿತಿಯ ಅಧ್ಯಕ್ಷರಾದ ಆನಂದ ಕುಲಾಲ್ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಸಭೆಗೆ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕುಶಾಲಪ್ಪ ಗೌಡ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ರಾಜು ಪೂಜಾರಿಯವರು ಹಾಗೂ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಆಗಮಿಸಿದ್ದರು . ಈ ಸಭೆಯಲ್ಲಿ ಹಿರಿಯ ವೃತ್ತಿ ಭಾಂದವರಾದ ಶಾಂತಿರಾಜ ಟೈಲರ್ ಕುಂಡದಬೆಟ್ಟು, ಶ್ರೀನಿವಾಸ ಟೈಲರ್ ಪಡ್ಡಂದಡ್ಕ, ಸದಾನಂದ ಟೈಲರ್ ಮೂಡುಕೋಡಿ, ಶೀನ ನಾಯ್ಕ ಕರಿಮಣೇಲು, ಇವರುಗಳನ್ನು ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಶಾಂತಿರಾಜ ಟೈಲರ್ ಇವರು ತಮ್ಮ ಅನಿಸಿಕೆಯನ್ನು ಹೇಳಿದರು ಹಾಗೂ ಈ ಸಂದರ್ಭದಲ್ಲಿ ಡಿಜಿಟಲ್ ಐಡಿ ಕಾರ್ಡ್ ಗಳನ್ನು ವಿತರಿಸಲಾಯಿತು ಮತ್ತು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಉಮೇಶ್ ಕಾರ್ಯದರ್ಶಿಯಾಗಿ ಸುನಿತಾ ಕೋಶಾಧಿಕಾರಿಯಾಗಿ ಸುಪ್ರೀತ ಇವರು ಆಯ್ಕೆಯಾದರು ಕಾರ್ಯಕ್ರಮದಲ್ಲಿ ಇತ್ತೀಚಿಗೆ ನಿಧನ ಹೊಂದಿದ ನಮ್ಮ ಕೆ.ಎಸ್.ಟಿ.ಎ ಕ್ಷೇತ್ರ ಸಮಿತಿ ಸದಸ್ಯರಾದ ಸಂಜೀವ ಟೈಲರ್ ಪಾಣೂರು, ಶಿಲ್ಪಾ ಆಚಾರ್ಯ ಗೋಳಿಯಂಗಡಿ ರಮೇಶ್ ಆಚಾರ್ಯ ಅಂಡಿಂಜೆ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು ಹಾಗೂ ಶಿಲ್ಪ ಆಚಾರ್ಯ ಇವರ ಕುಟುಂಬಕ್ಕೆ ದೇಣಿಗೆ ಸಂಗ್ರಹಿಸಲಾಯಿತು ಮುಖ್ಯ ಅತಿಥಿಯಾದ ಕುಶಾಲಪ್ಪ ಗೌಡ ಇವರು ಶುಭ ಹಾರೈಸಿದರು.

ನಿರ್ಗಮನ ಅಧ್ಯಕ್ಷರಾದ ಆನಂದ ಟೈಲರ್ ಇವರು ಅನಿಸಿಕೆ ವ್ಯಕ್ತಪಡಿಸಿದರು ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು.

ವಲಯದ ಕಾರ್ಯದರ್ಶಿ ಸಹನಾ ಶಾಸ್ತ್ರಿ ಅವರು ವರದಿ ಮಂಡನೆ ಮಾಡಿದರು ಪ್ರಮೀಳಾರವರು ಲೆಕ್ಕ ಪತ್ರ ಮಂಡನೆ ಮಾಡಿದರು ವಲಯದ ಅಧ್ಯಕ್ಷರಾದ ಆನಂದ ಟೈಲರ್ ಇವರು ಸ್ವಾಗತ ಭಾಷಣ ಮಾಡಿದರು ವಲಯದ ಕೋಶಾಧಿಕಾರಿ ಪ್ರಮೀಳ ಅವರು ಧನ್ಯವಾದವಿತ್ತರು ಸುನಿತಾ ರವರು ಕಾರ್ಯಕ್ರಮ ನಿರೂಪಿಸಿದರು ಕಾರ್ಯಕ್ರಮದ ನಂತರ ನಮ್ಮ ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷರು ರಾಘವ ಪುತ್ರನ್ ತೀರ ಅನಾರೋಗ್ಯ ಸ್ಥಿತಿಯಲ್ಲಿ ಇರುವುದರಿಂದ ವಲಯ ಸಮಿತಿಯ ಪದಾಧಿಕಾರಿಗಳು ಕ್ಷೇತ್ರ ಸಮಿತಿಯ ಪದಾಧಿಕಾರಿಗಳು ಇವರ ಮನೆಗೆ ಹೋಗಿ ಇವರನ್ನು ಸನ್ಮಾನಿಸಲಾಯಿತು ಹಾಗೂ ಆನಂದ ಟೈಲರ್ ಸಾವ್ಯ ಇವರನ್ನು ಕೂಡ ಮನೆಗೆ ಹೋಗಿ ಸನ್ಮಾನಿಸಲಾಯಿತು.

Related posts

ರೂರಲ್ ಐಟಿ ಕ್ವಿಜ್ ಸ್ಪರ್ಧೆ: ಎಸ್‌ಡಿಎಂ ಆಂ.ಮಾ. ಶಾಲಾ ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ : ತಿಥಿ ಕಾರ್ಯಕ್ರಮ ಪದಾಥ೯ಕ್ಕೆ ಬಡಿಸಲು ನಾಲ್ಕು ಆಮೆಗಳ ಬೇಟೆ: ನಾಲ್ಕು ಮಂದಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ಧರ್ಮಸ್ಥಳದ ಅಸ್ತಿತ್ವಕ್ಕೆ ಕೊಡಲಿಯೇಟು ನೀಡಲು ಮುಂದಾದವರ ಬಗ್ಗೆ ಮಾತನಾಡಿದ ಬಿ.ಎಲ್ ಸಂತೋಷ್ ವಿರುದ್ದ ನಗರ ನಕ್ಸಲರಿಂದ ಅವಹೇಳನ ಮಾತು ಸಮಾಜದ ತೇಜೋವಧೆ ಮಾಡುವ ಶಕ್ತಿಗಳನ್ನು ರಾಜ್ಯ ಸರ್ಕಾರ ಮಟ್ಟ ಹಾಕಬೇಕು ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹರೀಶ್ ಪೂಂಜ ಆಗ್ರಹ

Suddi Udaya

ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ನದಿಗೆ ಬಿದ್ದು ಸಾವು

Suddi Udaya

ಭಾರೀ ಮಳೆಗೆ ಬಂದಾರು ಪೇರಲ್ತಪಲಿಕೆಯಲ್ಲಿ ಗುಡ್ಡ ಜರಿದು ಹಾನಿ

Suddi Udaya

ಧರ್ಮಸ್ಥಳ: ಬಂಟರ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ನಿಧನ

Suddi Udaya
error: Content is protected !!