24.1 C
ಪುತ್ತೂರು, ಬೆಳ್ತಂಗಡಿ
September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಬಸ್ ನಲ್ಲಿ ಮೊಬೈಲ್ ಕಳ್ಳತನ

ಬೆಳ್ತಂಗಡಿ : ಬಸ್ ಗಳಲ್ಲಿ ಮೊಬೈಲ್ ಕಳ್ಳತನ ಮಾಡಿದ ಘಟನೆ ಬುಧವಾರ ಸಂಜೆ ನಡೆದಿದೆ. ಉಜಿರೆಯಿಂದ ಚಾರ್ಮಾಡಿ ಮೂಲಕ ಸಂಚರಿಸುವ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಕಡೆ ಸಂಚರಿಸುವ ಬಸ್ ಗಳಲ್ಲಿ 3 ಮಂದಿಯ ಮೊಬೈಲ್ ಕಳ್ಳತನವಾಗಿದೆ.ಸಂಜೆ ಹೊತ್ತು ಬಸ್ ಗಳಲ್ಲಿ ವಿಪರೀತ ರಶ್ ಇರುತ್ತದೆ. ಈ ವೇಳೆ ಮೊಬೈಲ್ ಕಳ್ಳತನ ನಡೆದಿದ್ದು,ಎರಡು ಬಸ್ ಗಳಲ್ಲಿ ಕಕ್ಕಿಂಜೆ ತಲುಪಿದ ವೇಳೆ ಮೊಬೈಲ್ ಬ್ಯಾಗ್ ಗಳಿಂದ ನಾಪತ್ತೆಯಾಗಿರುವುದು ತಿಳಿದುಬಂದಿದೆ.

ಮೊಬೈಲ್ ಕಳೆದುಕೊಂಡವರು ಯುವತಿಯರಾಗಿದ್ದು ಎಲ್ಲರೂ ಖಾಸಗಿ ಉದ್ಯೋಗಿಗಳಾಗಿದ್ದಾರೆ. ಈ ವೇಳೆ ಕಕ್ಕಿಂಜೆಯಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ತಪಾಸಣೆ ಮಾಡಿದ್ದರೂ ಕಳ್ಳತನವಾದ ಮೊಬೈಲ್ ಗಳು ಪತ್ತೆಯಾಗಿಲ್ಲ. ಉಜಿರೆಯಲ್ಲಿ ಬಸ್ ಹತ್ತುವ ವೇಳೆ ವಿಪರೀತ ರಶ್ ಮಧ್ಯೆ ಮೊಬೈಲ್ ಗಳನ್ನು ಕಳ್ಳತನ ನಡೆಸಿರುವ ಸಾಧ್ಯತೆಯಿದ್ದು,ಇದರ ಹಿಂದೆ ಮೊಬೈಲ್ ಕಳ್ಳರ ತಂಡ ಸಕ್ರಿಯವಾಗಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಬಸ್ ನಿರ್ವಾಹಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಮೊಬೈಲ್ ಕಳೆದುಕೊಂಡವರಿಗೆ ತಿಳಿಸಿದ್ದಾರೆ.

Related posts

ಮಹಾ ಕುಂಭಮೇಳದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪುಣ್ಯಸ್ನಾನ

Suddi Udaya

ಜೆಇಇ ಫಲಿತಾಂಶ : ಶ್ರೀ ಧ.ಮಂ. ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

Suddi Udaya

ಕುವೆಟ್ಟು:ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಆಶ್ರಯದಲ್ಲಿ ನಡೆಯುವ ಕೋಟಿ ಚೆನ್ನಯ ಕ್ರೀಡಾಕೂಟದ ಸಮಾಲೋಚನೆ ಸಭೆ

Suddi Udaya

ಉರುವಾಲು ಕಾರಿಂಜ ಶ್ರೀ ವನಶಾಸ್ತಾರ, ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಜೀರ್ಣೋದ್ದಾರಕ್ಕೆ ಕಿರಣ್ ಚಂದ್ರ ಪುಷ್ಪಗಿರಿ ರವರಿಂದ ರೂ. 1 ಲಕ್ಷ ದೇಣಿಗೆ

Suddi Udaya

ಪದ್ಮುಂಜ: ರವಿಚಂದ್ರ ಶೆಟ್ಟಿರವರ ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ

Suddi Udaya

ಭಾರಿ ಮಳೆ ನಾಳೆ (ಜೂ.27) ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

Suddi Udaya
error: Content is protected !!