ಬಂದಾರು: ಇಲ್ಲಿಯ ಪೇರಲ್ತಪಲಿಕೆ ಇಸುಬು ಅವರ ಮನೆಯ ಸಮೀಪ ಭಾರೀ ಮಳೆಯ ಪರಿಣಾಮ ಗುಡ್ಡ ಜರಿದು ಕೊಟ್ಟಿಗೆಗೆ ಹಾನಿ ಆದ ಘಟನೆ ಜು.22ರಂದು ನಡೆದಿದೆ.
ತಕ್ಷಣ ವಿಷಯ ತಿಳಿದ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಅವರು ಪಂಚಾಯತ್ ನಲ್ಲಿ ಕಾರ್ಯನಿರ್ವಹಣಾ ಅಧಿಕಾರಿಗಳನ್ನು ಕಳುಹಿಸಿ ವರದಿ ಪಡೆದುಕೊಂಡು ಮುಂಜಾಗ್ರತೆಗಾಗಿ ಮನೆಯವರನ್ನು ಸ್ಥಳಾಂತರ ಮಾಡಲು ತಿಳಿಸಿರುತ್ತಾರೆ.
ವರದಿ: ಮುಹಮ್ಮದ್ ಬಂದಾರು ಬಟ್ಲಡ್ಕ















