ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್ ಇದರ ಮಾಸಿಕ ಸಭೆ

Suddi Udaya

ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್ ಇದರ ಮಾಸಿಕ ಸಭೆಯು ಜು.26 ರಂದು ಬೆಳ್ತಂಗಡಿಯ ಲೋಬೋ ಟವರ್ಸ್ ನಲ್ಲಿ ನಡೆಯಿತು.

ಅನಿಯಮಿತವಾಗಿ ವಿದ್ಯುತ್‌ ಅಡಚಣೆಯಾಗುತ್ತಿರುವ ಬಗ್ಗೆ ಸಂಬಂಧಿಸಿದವರಿಗೆ ಮನವಿ, ರಸ್ತೆ ಬದಿ ವ್ಯಾಪಾರದಿಂದ ಅಧಿಕೃತ ವ್ಯಾಪಾರಸ್ಥರಿಗೆ ಆಗುತ್ತಿರುವ ತೊಂದರೆ, ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ಮುಖ್ಯರಸ್ತೆಯ ಬಗ್ಗೆ ಹೊರಡಿಸಲಾದ ನೋಟಿಫಿಕೇಶನ್ ಬಗ್ಗೆ ಚರ್ಚಿಸಲಾಯಿತು.

ಅಧ್ಯಕ್ಷ ಪುಷ್ಪರಾಜ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ರೋನಾಲ್ಡ್ ಲೋಬೋ ಧನ್ಯವಾದವಿತ್ತರು.

Leave a Comment

error: Content is protected !!