24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರುವಾಯನಕೆರೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ಅಳದಂಗಡಿ ವಲಯದಿಂದ ಉಂಬುಜೆ ಕೊರಗಪ್ಪರವರ ಶಿಥಿಲಗೊಂಡ ಮನೆಯ ಛಾವಣಿಯ ತೆರವು ಕಾರ್ಯಾಚರಣೆ


ಅಳದಂಗಡಿ ವಲಯ ವ್ಯಾಪ್ತಿಯ ನಾವರ ಗ್ರಾಮದ ಉಂಬುಜೆ ಎಂಬಲ್ಲಿ ಕೊರಗಪ್ಪ ಮಲೆಕುಡಿಯ ದಂಪತಿಯ ಮನೆಯ ಮೇಲ್ಚಾವಣಿಯು ತೀರ ದುಸ್ಥಿತಿಯಲ್ಲಿದ್ದು. ಯಾವುದೇ ಸಮಯದಲ್ಲಿ ಬಿದ್ದು ಹೋಗುವ ಪರಿಸ್ಥಿತಿಯಲ್ಲಿತ್ತು. ದಂಪತಿಗಳಿಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದು ಸ್ವತಂತ್ರವಾಗಿ ಯಾವುದೇ ಕೆಲಸಗಳನ್ನು ನೆರವೇರಿಸುವಲ್ಲಿ ಅಸಹಾಯಕರಾಗಿದ್ದರು. ದಂಪತಿಗಳಿಬ್ಬರನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಪಕ್ಕದ ಮನೆಯವರು ಕಳುಹಿಸಿದ್ದು ಮನೆ ಖಾಲಿ ಆಗಿತ್ತು. ಇದೇ ಸಂದರ್ಭದಲ್ಲಿ ಮನೆಯ ದುರಸ್ತಿ ಕಾರ್ಯ ಮಾಡುವುದು ಒಳಿತೆಂದು ಮನಗಂಡು ವೃದ್ಧರ ಆರೈಕೆಯನ್ನು ಮಾಡುತ್ತಿದ್ದ ಅವರ ಸಹೋದರ ಸಂಬಂಧಿಗಳು. ಮನೆಯ ಛಾವಣಿ ತೆರವುಗೊಳಿಸುವಲ್ಲಿ ವಿಪತ್ತು ನಿರ್ವಹಣಾ ಸ್ವಯಂ ಸೇವಕರ ನೆರವನ್ನು ಕೋರಿ ಮನವಿಯನ್ನು ಸಲ್ಲಿಸಿದ್ದರು.
ವಿಷಯವನ್ನು ವಲಯ ಮೇಲ್ವಿಚಾರಕರು ಹಾಗೂ ಯೋಜನಾಧಿಕಾರಿಗಳ ಗಮನಕ್ಕೆ ತಂದು ಮೇಲ್ಚಾವಣಿಯ ತೆರವು ಕಾರ್ಯವನ್ನು ನಿರ್ವಹಿಸಿದರು.

ಈ ಸಂದರ್ಭದಲ್ಲಿ ಘಟಕ ಪ್ರತಿನಿಧಿ ರಾಜೇಶ್ ಹಾಗೂ ಶ್ರೀಮತಿ ಶಕುಂತಲಾ, ಸ್ವಯಂ ಸೇವಕರಾದ ಪ್ರಕಾಶ್ ಕೊಲ್ಲಂಗೆ, ಶಿವಾನಂದ, ಶ್ರೀಕಾಂತ್, ಸರಸ್ವತಿ, ಹೇಮಾವತಿ, ಅಮಿತಾ ಹಾಗೂ ನಳಿನಿ ಸ್ವಯಂಸೇವಕರು ಭಾಗವಹಿಸಿದರು.

ಸ್ವಯಂ ಸೇವಕರೊಂದಿಗೆ ಈ ಕಾರ್ಯದಲ್ಲಿ ಸೋದರ ಸಂಬಂಧಿಗಳು ಸಹಕರಿಸಿದರು. ಸೇವಾ ಪ್ರತಿನಿಧಿ ಕುಮಾರಿ ಸುಲೋಚನಾರವರು ಸ್ಥಳದಲ್ಲಿ ಉಪಸ್ಥಿತರಿದ್ದರು.

Related posts

ಗೇರುಕಟ್ಟೆ: ಶ್ರೀ ದುರ್ಗಾ ಭಜನಾ ಮಂಡಳಿ ಬೊಲ್ಲುಕಲ್ಲು ಸಮಿತಿಯಿಂದ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ

Suddi Udaya

ಬೆಳ್ತಂಗಡಿ: ಸಹಾಯಕ ಪ್ರಾಧ್ಯಾಪಕಿ ಸೌಮ್ಯಲತಾ ರವರಿಗೆ ಪಿಹೆಚ್ ಡಿ ಪದವಿ

Suddi Udaya

ಅಗ್ರಿಲೀಫ್ ಸಂಸ್ಥೆಯಲ್ಲಿ ವಿವಿಧ ಉದ್ಯೋಗಾವಕಾಶ: ಆ.18ರಂದು ಒಷ್ಯನ್ ಪರ್ಲ್ ನಲ್ಲಿ ಮೆಗಾ ಉದ್ಯೋಗ ಮೇಳ

Suddi Udaya

ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಂದ ಶಿಲಾನ್ಯಾಸ

Suddi Udaya

ಕಕ್ಕಿಂಜೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಆಡಳಿತ ಸಮಿತಿಗೆ ಆಯ್ಕೆ

Suddi Udaya

ಅರಸಿನಮಕ್ಕಿ: ಜೋತಿಷ್ಯಿ ರಾಮಕೃಷ್ಣ ಖಾಡಿಲ್ಕರ್ ನಿಧನ

Suddi Udaya
error: Content is protected !!