ಸುನ್ನೀ ಮ್ಯಾನೇಜ್ ಮೆಂಟ್ ಅಸೋಶಿಯೇಷನ್ ನ ಬೆಳ್ತಂಗಡಿ ರೀಜಿನಲ್ ಇದರ ವಾರ್ಷಿಕ ಕೌನ್ಸಿಲ್

Suddi Udaya

ಬೆಳ್ತಂಗಡಿ: ಸುನ್ನೀ ಮ್ಯಾನೇಜ್ ಮೆಂಟ್ ಅಸೋಶಿಯೇಷನ್ ನ ಬೆಳ್ತಂಗಡಿ ರೀಜಿನಲ್ ಇದರ ವಾರ್ಷಿಕ ಕೌನ್ಸಿಲ್ ಗುರುವಾಯನಕೆರೆ ಸಮುದಾಯ ಭವನದಲ್ಲಿ ಆ.1 ರಂದು ನಡೆಯಿತು.
ಜಾರಿಗೆಬೈಲು ಮುದರ್ರಿಸ್ ಯಾಸಿರ್ ಫಾಝಿಲ್ ಅಲ್-ಫುರ್ಖಾನಿ ದುವಾ ನೆರವೇರಿಸಿದರು. ಗುರುವಾಯನಕೆರೆ ಮುದರ್ರಿಸ್ ರಾದ ಆದಂ ಅಹ್ಸನಿ ಉದ್ಘಾಟಿಸಿದರು.


ಸಬಾದ್ಯಕ್ಷತೆಯನ್ನು ಅಬ್ದುಲ್ ಲತೀಫ್ ಹಾಜಿ ಎಸ್.ಎಮ್.ಎಸ್ ವಹಿಸಿದ್ದರು.
ಅಬ್ದುರ್ರಹ್ಮಾನ್ ಸಖಾಫಿ ನಾವೂರು ವಿಷಯ ಮಂಡನೆಗೈದರು. ಅಬ್ದುಲ್ ಬಶೀರ್ ಮದನಿಯವರ ನೇತೃತ್ವದಲ್ಲಿ ವಾರ್ಷಿಕ ಕೌನ್ಸಿಲ್ ನಡೆಸಲಾಯಿತು.


ವೇದಿಕೆಯಲ್ಲಿ ಯಾಕೂಬ್ ಮುಸ್ಲಿಯಾರ್,ಎ.ಕೆ.ಅಹ್ಮದ್, ಉಸ್ಮಾನ್ ಶಾಫಿ,ಇಸ್ಮಾಯಿಲ್ ಉಲ್ತೂರು,ಉಮರ್ ಮಟನ್, ಅಬೂಬಕ್ಕರ್ ಹಾಜಿ ಪರಪ್ಪು, ಅಬ್ದುಲ್ ಕರೀಮ್ ಗೇರುಕಟ್ಟೆ ಹಾಗೂ ರೀಜನಲ್ ವ್ಯಾಪ್ತಿಗೆ ಬರುವ ಮೊಹಲ್ಲಾಗಳ ಖತೀಬರುಗಳು,ಸದರ್ ಉಸ್ತಾದರುಗಳು, ಅಧ್ಯಕ್ಷರುಗಳು,ಸದಸ್ಯರುಗಳು ಉಪಸ್ಥಿತರಿದ್ದರು.
ರೀಜಿನಲ್ ಕಾರ್ಯದರ್ಶಿ ರಝಾಕ್ ಸಅದಿ ಸ್ವಾಗತಿಸಿ, ನೂತನ ಸಂಘಟನಾ ಕಾರ್ಯದರ್ಶಿ ಸಂಶೀರ್ ಸಖಾಫಿ ಧನ್ಯವಾದವಿತ್ತರು.

Leave a Comment

error: Content is protected !!