ಅಳದಂಗಡಿ ಶೋಚನೀಯ ಸ್ಥಿತಿಯಲ್ಲಿ ಸೋರುವ ಮನೆಯಲ್ಲಿ ತಾಯಿ ಮಕ್ಕಳ ಜೀವನ: ಅಳದಂಗಡಿ ಗ್ರಾಮ ಪಂಚಾಯತನಿಂದ ಮನೆಗೆ ಶೀಟ್ ಹಾಗೂ ಮುಖ್ಯ ಬಾಗಿಲು ಅಳವಡಿಕೆಗೆ ನಿರ್ಧಾರ: ಪಂಚಾಯತ್ ಅಧ್ಯಕ್ಷೆ ಸೌಮ್ಯ ಹರೀಪ್ರಸಾದ್ ಸುದ್ದಿ ಉದಯ ಪತ್ರಿಕೆಗೆ ಹೇಳಿಕೆ

Suddi Udaya

ಅಳದಂಗಡಿ: ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಳುಗುಡ್ಡೆ ಪರಿಸರದ ಶೋಚನೀಯ ಪರಿಸ್ಥಿತಿಯಲ್ಲಿ,ಸೋರುವ ಜೋಪಡಿಯಲ್ಲಿ ಬದುಕು ಸಾಗುಸುತ್ತಿದ್ದ ಪ್ರೇಮರವರ ಮನೆಯ ಬಗ್ಗೆ ಸುದ್ದಿ ಉದಯ ವಾರಪತ್ರಿಕೆ ವರದಿ ಮಾಡಿದ್ದು ಇಂದು ಮನೆಗೆ ಅಳದಂಗಡಿ ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಹರಿಪ್ರಸಾದ್ ಅವರು ಬೇಟಿ ನೀಡಿದ್ದಾರೆ‌.

ಅವರು ನಾಳೆ ಪಂಚಾಯತ್ ವತಿಯಿಂದ ಮನೆಯ ಮೇಲ್ಛಾವಣಿಗೆ ಶೀಟ್ ಅಳವಡಿಸಲಾಗುವುದು ಹಾಗೂ ಮನೆಗೆ ಮುಖ್ಯ ಬಾಗಿಲು ನಿರ್ಮಿಸಿ ಕೊಡುವ ಬಗ್ಗೆ ಸುದ್ದಿ ಉದಯ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಹರಿಪ್ರಸಾದ್,ಗೀರೀಶ್, ಪುನೀತ್ ಹಾಗೂ ಇತರರು ಉಪಸ್ಥಿತರಿದ್ದರು ‌

Leave a Comment

error: Content is protected !!