ಬೆಳ್ತಂಗಡಿ ಬಿಲ್ಲವ ಸಂಘದಿಂದ ಶಿವಗಿರಿ ಮಠಕ್ಕೆ ಧಾರ್ಮಿಕ ಪ್ರವಾಸ

Suddi Udaya

ಬೆಳ್ತಂಗಡಿ : ಬಿಲ್ಲವ ಸಮಾಜ ಬಾಂಧವರಿಂದ ಆ.7 ರಂದು ಶಿವಗಿರಿ ಮಠಕ್ಕೆ ಧಾರ್ಮಿಕ ಪ್ರವಾಸ ಕೈಗೊಳ್ಳಲಾಯಿತು.

ಬ್ರಹ್ಮ ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಸಂದರ್ಶಿಸಿದ ಸ್ಥಳ ವೀಕ್ಷಣೆ, ಯಜ್ಞ ಮಂಟಪ ವೀಕ್ಷಣೆ, ಶಾರದಾ ಪೀಠ, ಬ್ರಹ್ಮ ಶ್ರೀ ನಾರಾಯಣಗುರು ಪ್ರಾಣ ತ್ಯಾಗ ಮಾಡಿದ ಸ್ಥಳ, ಬ್ರಹ್ಮಶ್ರೀ ನಾರಾಯಣ ಗುರು ಸಮಾಧಿ ಸ್ಥಳ, ಬ್ರಹ್ಮ ಶ್ರೀ ನಾರಾಯಣ ಗುರು ಅವರ ಶಿಷ್ಯ ಬೋದನಂದ ಸ್ವಾಮೀಜಿಯವರ ಸಮಾಧಿ ಸ್ಥಳ ವೀಕ್ಷಣೆ ಮಾಡಲಾಯಿತು.

ಮಠದ ಸ್ಥಳಗಳ ಬಗ್ಗೆ ಮತ್ತು ಬ್ರಹ್ಮ ಶ್ರೀ ನಾರಾಯಣ ಗುರುಗಳ ಬಗ್ಗೆ ಮಠದ ಸ್ವಾಮೀಜಿ ಸತ್ಯಾನಂದ ತೀರ್ಥ ಮಾಹಿತಿ ನೀಡಿದರು. ಧಾರ್ಮಿಕ ಪ್ರವಾಸದ ಉಸ್ತುವಾರಿಯನ್ನು ರಘುನಾಥ ಶಾಂತಿ ಬೆಳ್ತಂಗಡಿ ಮತ್ತು ಸುಂದರ ಪೂಜಾರಿ ಪುದುವೆಟ್ಟು ವಹಿಸಿದರು.

Leave a Comment

error: Content is protected !!