ತೋಟತ್ತಾಡಿ: ಅರಂತಬೈಲು ಶ್ರೀ ಉಳ್ಳಾಲ್ತಿ ಗೆಳೆಯರ ಬಳಗ ಇದರ 39ನೇ ಸೇವಾ ಯೋಜನೆಯ ಪ್ರಯುಕ್ತ ಇತ್ತೀಚೆಗೆ ತನ್ನ ಮನೆಯ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಕಾಲು ಜಾರಿ ಬಿದ್ದು ತಲೆಗೆ ಗಂಭೀರ ಗಾಯವಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೋಟತ್ತಾಡಿ ಗ್ರಾಮದ ಗಾಣದಕೊಟ್ಟಿಗೆ ಮನೆಯ ಸುನಂದ ರವರ ಪುತ್ರಿ ಗುಲಾಬಿಯವರಿಗೆ 15,000ರೂ ಆರ್ಥಿಕ ಸಹಾಯವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಉಳ್ಳಾಲ್ತಿ ಗೆಳೆಯರ ಬಳಗದ ಅಧ್ಯಕ್ಷ ಪ್ರವೀಣ್ ಪೂಜಾರಿ ಹೊಸಮನೆ, ಕಾರ್ಯದರ್ಶಿ ನಾರಾಯಣ ಶೆಟ್ಟಿ ಕುಡೆಂಚ, ಶ್ರೀ ಉಳ್ಳಾಲ್ತಿ ಭಜನಾ ಮಂಡಳಿ ಅಧ್ಯಕ್ಷ ದಿವಾಕರ ಪೂಜಾರಿ ವಲಚ್ಚಿಲ್, ಶ್ರೀ ಗೆಳೆಯರ ಬಳಗದ ಪದಾಧಿಕಾರಿಗಳಾದ ಸನತ್ ಕುಮಾರ್ ಮೂರ್ಜೆ, ನಾರಾಯಣ ಶೆಟ್ಟಿ ನಿಸರ್ಗ ದಿವಾಕರ ಪೂಜಾರಿ ಪರಪಿತ್ತಿಲು, ಡಾಕಯ್ಯ ಗೌಡ ಕೊಂಡೊಟ್ಟು ಉಪಸ್ಥಿತರಿದ್ದರು.