ಮಿದುಳಿನ ರಕ್ತಸ್ರಾವ: ಮಹಿಳೆ ಮೃತ್ಯು

Suddi Udaya

ಬೆಳ್ತಂಗಡಿ:ಮಿತ್ತಬಾಗಿಲು ಗ್ರಾಮದ ಕಿಲ್ಲೂರು ಸಮೀಪದ ಗುತ್ತಿಗೆಬೆಟ್ಟು ನಿವಾಸಿ ಶ್ರೀಮತಿ ಶಾರದಾ(40ವ) ಅವರು ಮಿದುಳಿನ ರಕ್ತಸ್ರಾವ ಒಳಗಾಗಿ ಮೃತ ಪಟ್ಟ ಘಟನೆ ಆ.14ರಂದು ವರದಿಯಾಗಿದೆ.
ಮಿದುಳಿನ ರಕ್ತಸ್ರಾವಕ್ಕೆ ಒಳಗಾಗಿದ್ದ ಅವರು ಶಸ್ತ್ರಚಿಕಿತ್ಸೆ ಬಳಿಕ ತನ್ನ ಸಹೋದರನ ಮನೆಯಾದ ಬಿಸಿರೋಡ್‌ನಲ್ಲಿ ವಾಸ್ತವ್ಯವಿದ್ದು, ಅಲ್ಲಿಯೇ ನಿಧನರಾರರೆಂದು ವರದಿಯಾಗಿದೆ. ಇವರ ಪತಿ ಗೋಪಾಲ ಮೂಲ್ಯ ಕೂಡ ಮೂರು ವರ್ಷಗಳ ಹಿಂದೆ ಕಾಯಿಲೆಯಿಂದ ಮೃತ ಪಟ್ಟಿದ್ದರು. ಮೃತ ಶಾರದಾ ಅವರು ಆಶಾ ಕಾರ್ಯಕರ್ತೆಯಾಗಿ ,
ಬಂಗಾಡಿ ಸಹಕಾರಿ ಸಂಘದಲ್ಲಿ ಪಿಗ್ಮಿ ಸಂಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದರು. ಮೃತರು ಪುತ್ರ ಹಾಗೂ ಪುತ್ರಿ ಬಂಧು-ವರ್ಗದವರನ್ನು ಅಗಲಿದ್ದಾರೆ. ತೀರಾ ಕಷ್ಟದಲ್ಲಿ ಜೀವನ ಸಾಗಿಸಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದ ಶಾರದವರ ಸಾವಿನಿಂದ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗಿದೆ.

Leave a Comment

error: Content is protected !!