ಹೊಸಪಟ್ಣ ಹಾಲು ಉ.ಸ. ಸಂಘ: ಮಹಾಸಭೆ

Suddi Udaya

ವೇಣೂರು: ಹೊಸಪಟ್ಣ ಹಾಲು ಉತ್ಪಾದಕರ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.14ರಂದು ಸಂಘದ ವಠಾರದಲ್ಲಿ ಜರಗಿತು.

ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಹಿಂದಿನ ಸಾಮಾನ್ಯ ಸಭೆಗಳ ನಡವಳಿಗಳನ್ನು ಓದಿ ಸ್ವೀಕರಿಸಲಾಯಿತು. ಪ್ರಸಕ್ತ ಸಾಲಿನ ವಾರ್ಷಿಕ ವರದಿಯನ್ನು ಓದಿ ಮಂಜೂರು ಮಾಡಲಾಯಿತು. ಲೆಕ್ಕ ಪರಿಶೋಧನ ವರದಿಯ ಪರಿಶೀಲನೆ, ಮಂಜೂರಾತಿ ಹಾಗೂ ವಿವಿಧ ಕಾರ್ಯಚಟುವಟಿಕೆಗಳ ಅನುಮೋದನೆ ಸಭೆಯಲ್ಲಿ ಪಡೆಯಲಾಯಿತು.

ದ.ಕ. ಹಾಲು ಒಕ್ಕೂಟದ ಅಧಿಕಾರಿ ಶ್ರೀಮತಿ ಸುಚಿತ್ರ , ಸಂಘದ ಉಪಾಧ್ಯಕ್ಷ ಶಿವಣ್ಣ ಪೂಜಾರಿ, ನಿರ್ದೇಶಕರಾದ ಸುರೇಶ್ ಪೂಜಾರಿ, ಪ್ರವೀಣ್ ಪೂಜಾರಿ, ವಸಂತ ಪೂಜಾರಿ, ಮೋಹನಂದ ಪೂಜಾರಿ, ರವಿ ಪೂಜಾರಿ,ಸಂತೋಷ್,ರೇವತಿ, ಹೇಮಾವತಿ, ಎಮಿಲ್ಡಾ ಡಿಸೋಜ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರು ಅಶೋಕ್ ಪೂಜಾರಿ ಕಜಿಪಟ ಸ್ವಾಗತಿಸಿ, ಕಾರ್ಯದರ್ಶಿ ರಂಜಿತ್ ವಿ.ಎಸ್. ವಂದಿಸಿದರು.

Leave a Comment

error: Content is protected !!