ಉಜಿರೆ : ಎಸ್. ಡಿ. ಎಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ‘ಗೋಡೆ ಬರಹ’ ಅನಾವರಣ”

Suddi Udaya

ಉಜಿರೆ : ವಿದ್ಯಾರ್ಥಿಗಳ ಜ್ಞಾನ ಭಂಡಾರದ ವೃದ್ಧಿಗಾಗಿ ಇರುವ ‘ಸ್ಮೃತಿ’ ಹೆಸರಿನ ಕಾಲೇಜಿನ ಗೋಡೆ ಬರಹಕ್ಕೆ ವಿದ್ಯಾರ್ಥಿಗಳೇ ತಯಾರಿಸಿದ  ವಿಶೇಷ ಸಂಚಿಕೆಯನ್ನು ಅಂಟಿಸಿ ಅನಾವರಣಗೊಳಿಸಲಾಯಿತು. ಖಾವಂದರ ಬಾಲ್ಯ, ಜೀವನ, ಸಾಧನೆಗಳನ್ನೊಳಗೊಂಡ ಈ ಗೋಡೆ ಬರಹ,ಚಿತ್ರಗಳ ಚಿತ್ತಾರಗಳೊಂದಿಗೆ ಗಮನಸೆಳೆಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಉಪ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಜೊತೆಗಿದ್ದು ವಿದ್ಯಾರ್ಥಿಗಳ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಜೀವಶಾಸ್ತ್ರ ಉಪನ್ಯಾಸಕರಾದ ಪ್ರದೀಪ್ ಹಾಗೂ ರಾಸಾಯನ ಶಾಸ್ತ್ರದ ಉಪನ್ಯಾಸಕಿ ಚೈತ್ರ ಉಪಸ್ಥಿತರಿದ್ದರು.

Leave a Comment

error: Content is protected !!