ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿಶಿಲ : ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಪೌಷ್ಟಿಕ ಆಹಾರ ಸಿರಿ ಧಾನ್ಯ ಬಳಕೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ

ಶಿಶಿಲ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ .ಟ್ರಸ್ಟ್ ಬೆಳ್ತಂಗಡಿ ತಾಲೂಕು ಅರಸಿನಮಕ್ಕಿ ವಲಯದ ಶಿಶಿಲ ಒಕ್ಕೂಟ ಸಮುದಾಯ ಭವನದಲ್ಲಿ ಶಿಶಿಲ ಹೇವಾಜೆ ಬೂಡುದಮಕ್ಕಿ ಪೆರ್ಲ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಪೌಷ್ಟಿಕ ಆಹಾರ ಸಿರಿ ಧಾನ್ಯ ಬಳಕೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆ.16 ರಂದು ನಡೆಸಲಾಯಿತು .

ಕಾರ್ಯಕ್ರಮದ ಉದ್ಘಾಟನೆಯನ್ನು ಶಿಶಿಲೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ ಮೂಡೆತ್ತಾಯರವರು ಉದ್ಘಾಟನೆ ಮಾಡಿ ಶುಭ ಹಾರೈಸಿದರು.

ಬರೋಡಾ ಬ್ಯಾಂಕ್ ಮೆನೇಜರ್ ರಾಕೇಶ್ ಪಿ ನಾಯ್ಕ್ ,ಸಿ.ಎ ಬ್ಯಾಂಕ್ ಮೆನೇಜರ್ ರಂಜಿತ್ ಶೆಟ್ಟಿ,ನಿರ್ದೇಶಕರು ಶ್ರೀಮತಿ ತಾರಾರವರು ಕಾರ್ಯಕ್ರಮಕ್ಕೆ ಸುಭ ಹಾರೈಸಿದರು.ವಲಯ ಮೇಲ್ವಿಚಾರಕರಾದ ಶಶಿಕಲಾರವರು ಜ್ನಾನವಿಕಾಸ ಕಾರ್ಯಕ್ರಮದ ಹುಟ್ಟು ಹಾಗೂ ಧ್ಯೇಯೋದ್ದೇಶಗಳ ಬಗ್ಗೆ ತಿಳಿಸುತ್ತಾ ಸಿರಿ ಧಾನ್ಯ ಬಳಕೆ ಮಾಡಿ ಆರೋಗ್ಯ ವೃದ್ದಿಸಿಕೊಳ್ಳುವಂತೆ ಮಹಿಳೆಯರು ಸೇವಿಸುವ ಪೌಷ್ಟಿಕ ಆಹಾರ ಸೇವನೆ ವಿಧಾನದ ಬಗ್ಗೆ ಮಾಹಿತಿ ನೀಡಿದರು.ಸಿರಿಧಾನ್ಯ ಮಾರುಕಟ್ಟೆ ಅಧಿಕಾರಿಯವರಾದ ವಿವಿಧ ಸಿರಿ ಧಾನ್ಯಗಳ ಪರಿಚಯ ಮಾಡುವುದರೊಂದಿಗೆ ನವಣೆ, ಊದಲು , ಕೊರಳು, ಸಜ್ಜೆ, ಸಾಮೆ ,ರಾಗಿ ಬಳಕೆ ವಿಧಾನ ಇವುಗಳಿಂದ ತಯಾರಿಸುವ ವಿವಿಧ ತಿಂಡಿಗಳ ಬಗ್ಗೆ ಬಳಕೆ ವಿಧಾನ & ರೋಗನಿರೋಧಕ ಶಕ್ತಿ ಬಗ್ಗೆ ಮಾಹಿತಿ ನೀಡಿದರು..

ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಸಮನ್ವಯಧಿಕಾರಿಯವರಾದ ಮಧುರಾರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಪೆರ್ಲ ಸೇವಾಪ್ರತಿನಿಧಿ ಅರುಣಾರವರು ಸ್ವಾಗತಿಸಿ ಹೇವಾಜೆ ಸೇವಾಪ್ರತಿನಿಧಿ ರಶ್ಮಿತಾರವರು ಧನ್ಯವಾದ ನೀಡಿದರು ಶಿಶಿಲ ಸೇವಾಪ್ರತಿನಿಧಿ ಗಾಯತ್ರಿ ಉಪಸ್ಥಿತರಿದ್ದರು .

Related posts

ತ್ರೋಬಾಲ್ ಪಂದ್ಯಾಟ: ಕರಂಬಾರು ಶಾಲೆ ಬಾಲಕಿಯರ ತಂಡ ಪ್ರಥಮ ಸ್ಥಾನ

Suddi Udaya

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂರಿಂದ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದ ಚಿರಾಗ್ ನಾಯಕ್‌ಗೆ ಅಭಿನಂದನೆ

Suddi Udaya

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಮೇಲೆ ಪೋಕ್ಸೋ ಪ್ರಕರಣ ದಾಖಲು

Suddi Udaya

ಉಡುಪಿಯಲ್ಲಿ ಲಕ್ಷಕಂಠ ಗೀತಾ ಭಜನೋತ್ಸವಕ್ಕೆ ಬೆಳ್ತಂಗಡಿ ತಾಲ್ಲೂಕಿನ ಭಜನಾಪಟುಗಳು

Suddi Udaya

ಒಲಂಪಿಯಾಡ್ ಪರೀಕ್ಷೆ ಪ್ರಥಮ ರ‍್ಯಾಂಕ್ ಬಂದ ವಿದ್ಯಾರ್ಥಿಗೆ ಸ್ಕಾಲರ್ಶಿಪ್

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶ್ರೀ ಕೃಷ್ಣ ಭಜನಾ ಮಂದಿರ ನಿರ್ಮಾಣಕ್ಕೆ ರೂ.1 ಲಕ್ಷ ದೇಣಿಗೆ

Suddi Udaya
error: Content is protected !!