ಪುದುವೆಟ್ಟು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆ

Suddi Udaya

ಪುದುವೆಟ್ಟು: ಶೌರ್ಯ ವಿಪತ್ತು ನಿರ್ವಹಣಾ ಘಟಕ ಪುದುವೆಟ್ಟು ಇದರ ಆಗಸ್ಟ್ ತಿಂಗಳ ಮಾಸಿಕ ಸಭೆಯನ್ನು ಧರ್ಮಸ್ಥಳ ವಲಯ ಮೇಲ್ವಿಚಾರಕರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಸಭೆಯಲ್ಲಿ 11 ಮಂದಿ ಸ್ವಯಂ ಸೇವಕರು ಭಾಗವಹಿಸಿದ್ದರು. ಪುದುವೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ್ ಗೌಡ ಉಪಸ್ಥಿತರಿದ್ದರು. ಘಟಕದ ನಡವಳಿಯ ಬಗ್ಗೆ ಮಾತನಾಡಿದ ಮೇಲ್ವಿಚಾರಕರು, ತುರ್ತು ಸಂದರ್ಭಗಳಲ್ಲಿ ಸ್ವಯಂ ಸೇವಕರು ಸೇವೆಯನ್ನು ನೀಡುವುದು, ತಿಂಗಳ ಸೇವೆಯನ್ನು ಹಾಗೂ ಸಭೆಯನ್ನು ನಡೆಸುವುದು ವಿಶೇಷ ಸಂದರ್ಭಗಳಲ್ಲಿ ಸದಾ ಸಿದ್ದರಿರಬೇಕೆಂದು ಮನವಿ ಮಾಡಿದರು.

ಪ್ರತಿನಿಧಿ ಶಶಿಧರ್ ಜಿ ಸ್ವಾಗತಿಸಿದರು. ಸ್ವಯಂ ಸೇವಕರಾದ ರಾಜೇಶ್, ಸಿಂಧು, ಪುಷ್ಪ, ಯಶೋದಾ ,ವಿಠಲ, ಭರತೇಶ , ಡಯಾನ, ಚೇತನ್ ಕುಮಾರ್, ಧನ್ಯ ಕುಮಾರ್ ಭಾಗವಹಿಸಿದರು .

Leave a Comment

error: Content is protected !!