22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಮಸ್ಯೆ

ಬಂಗಾಡಿ ಪರಿಸರದಲ್ಲಿ ವಿದ್ಯುತ್ ಸಮಸ್ಯೆ: ಬಗೆಹರಿಸದೆ ಇದ್ದಲ್ಲಿ ಕಛೇರಿಯ ಮುಂದೆ ಪ್ರತಿಭಟನೆ ಗ್ರಾಮಸ್ಥರ ಆಗ್ರಹ

ಇಂದಬೆಟ್ಟು -ಕೊಲ್ಲಿ ಫೀಡರ್ ಬಂಗಾಡಿ ವ್ಯಾಪ್ತಿಯಲ್ಲಿ ಮಳೆಗಾಲದ ಮುಂಚೆಯಿಂದಲೂ ಆಗುತ್ತಿರುವ ವಿದ್ಯುತ್ ಸಮಸ್ಯೆಯ ಬಗ್ಗೆ ಬೆಳ್ತಂಗಡಿ ಇಲಾಖೆಯ ಆಧಿಕಾರಿಯವರಿಗೆ (ಎಇಇ)ಸಾರ್ವಜನಿಕ ಲಿಖಿತ ಮನವಿಯನ್ನು ನೀಡಿ ಒಂದು ತಿಂಗಳೊಳಗಡೆ ಸರಿ ಪಡಿಸುವುದಾಗಿ ಭರವಸೆಯನ್ನು ನೀಡಿ ತಿಂಗಳು ಕಳೆದರೂ ಇನ್ನೂ ಆಗಲಿಲ್ಲ .

ಹಗಲಲ್ಲಿ ಸಮರ್ಪಕ ವಿದ್ಯುತ್ ಇಲ್ಲ 5 ದಿವಸದಿಂದ ರಾತ್ರಿ 11ಗಂಟೆ ಸಮಯದಿಂದ ಬೆಳಿಗ್ಗೆ 7,8 ಗಂಟೆ ಯವರೆಗೆ ಪ್ರತಿ ನಿತ್ಯ ವಿದ್ಯುತ್ ಇರುವುದು ಇಲ್ಲ. ಸೊಳ್ಳೆಕಾಟವು ಅಧಿಕವಾಗಿರುವುದರಿಂದ ಡೆಂಗ್ಯೂ ಜ್ವರವು ಹೆಚ್ಚುತ್ತಿದ್ದು.. ಪ್ಯಾನ್ ಇಲ್ಲದೆ ನಿದ್ದೆ ಮಾಡುವುದೆ ಕಷ್ಟವಾಗಿದೆ, ಬೆಳಿಗ್ಗೆ ಶಾಲಾ ಮಕ್ಕಳಿಗೆ, ಕೆಲಸಕ್ಕೆ ಹೋಗುವವರಿಗೆ ಉಪಹಾರ ತಯಾರಿ ಮಾಡುವುದು ಸಮಸ್ಯೆ ಯಾಗುತ್ತಿದೆ.
ಇನ್ನು ಹಲವು ಕಡೆ ಹೆಚ್ ಟಿ ಲೈನ್ ತಾಗಿಕೊಂಡಿರುವ ಗಿಡ ಗಂಟಿಗಳ ತೆರವು ಸಂಪೂರ್ಣವಾಗಿಲ್ಲ, ಇತ್ತೀಚೆಗೆ ಬಂಗಾಡಿ ಫಿಚಾಲಾರು ಟಿಸಿ ಯಲ್ಲಿ ಹೈ ವೋಲ್ಟೇಜ್ ವಿದ್ಯುತ್ ಹರಿದು ಲಿಂಗಾಂತ್ಯಾರು ಜನಾರ್ಧನ ದೇವಾಡಿಗರ ಮನೆಯ ಟಿವಿ ಸಂಪೂರ್ಣ ಸುಟ್ಟು ಹೋಗಿ ಮನೆಯು ಅಪಾಯದಿಂದ ಪಾರಾಗಿದೆ. ನೆರೆಯ 2 ಮನೆಯ ಪ್ಯಾನ್ ಸುಟ್ಟು ಹೋಗಿವೆ. ಮಳೆಗಾಲದ ಮುಂಚೆ ತೆರವುಗೊಳಿಸಬೇಕಾದ ಮರ, ಗಿಡ ,ಗೆಲ್ಲುಗಳನ್ನು ಮಳೆಗಾಲದಲ್ಲಿ ತೆರವುಗೊಳಿಸಲು ಮಳೆ ಅಡ್ಡಿಯಾಗುತ್ತಿರುವ ಕಾರಣ ತಿಳಿಸುತ್ತಾರೆ.

ಇಲ್ಲಿ ಲೈನ್ ಮ್ಯಾನ್ ಸಿಂಬಂದಿಗಳ ಕೊರತೆಯು ಇದ್ದು .ಕೂಡಲೆ ಸಂಬಂಧ ಪಟ್ಟ ಆಧಿಕಾರಿಗಳು ವಿದ್ಯುತ್ ಸಮಸೈ ಯನ್ನು ಬಗೆಹರಿಸದೆ ಇದ್ದಲ್ಲಿ ಕಛೇರಿಯ ಮುಂದೆ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ

Related posts

ಕ್ಯಾಂಟಿನ್‌ನಲ್ಲಿ ವೇಶ್ಯಾವಟಿಕೆ ಪ್ರಕರಣ: ಆರೋಪಿ ಸುಂದರ್ ಶೆಟ್ಟಿಗೆ ಜಾಮೀನು ಮಂಜೂರು

Suddi Udaya

ನಡ: ಸ್ಟಾರ್ ಲೈನ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ” ಫಿಟ್ ಫೆಸ್ಟ್ 2024 “

Suddi Udaya

ಕುವೆಟ್ಟು: ಮಹಮ್ಮಾಯಿ ದೇವಿಯ ಮಾರಿ ಪೂಜೆ ಹಾಗೂ ಗುಳಿಗ ದೈವದ ನೇಮೋತ್ಸವ

Suddi Udaya

ಕಕ್ಯಪದವು ಎಲ್.ಸಿ.ಆರ್ ವಿದ್ಯಾಸಂಸ್ಥೆಯಲ್ಲಿ ಪ.ಪೂ. ವಿಭಾಗದ ವಿದ್ಯಾರ್ಥಿ‌‌ ಸಂಘದ ಉದ್ಘಾಟನೆ ಹಾಗೂ ಸ್ವಾಗತ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಕೆಮ್ಮಿನ ಸಿರಪ್‌ ಗೆ ವೈದ್ಯರ ಚೀಟಿ ಕಡ್ಡಾಯ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

Suddi Udaya
error: Content is protected !!