ಗೇರುಕಟ್ಟೆ ಹಾ.ಉ.ಸ. ಸಂಘ ಹಾಗೂ ಬಿ.ಎಮ್.ಸಿ.ಗೆ ಕರ್ನಾಟಕ ಹಾ.ಮ. ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಭೇಟಿ

Suddi Udaya

Updated on:

ಗೇರುಕಟ್ಟೆ : ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ಬಿ.ಎಮ್.ಸಿ.ಗೆ ಕರ್ನಾಟಕ ಹಾಲು ಮಂಡಳಿ ಬೆಂಗಳೂರು ನಿರ್ದೇಶಕ ಹಾಗೂ ದ.ಕ,ಸ ಹಾಲು ಒಕ್ಕೂಟ ಮಂಗಳೂರು ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಭೇಟಿ ನೀಡಿದ್ದರು.

ಇವರಿಗೆ ಸಂಘದ ವತಿಯಿಂದ ಅಧ್ಯಕ್ಷ ಜನಾರ್ಧನ ಗೌಡ ಕೆ.ಶಾಲು ಹೊದಿಸಿ, ಸನ್ಮಾನಿಸಿ, ಗೌರವಿಸಿದರು.

ನಂತರ ಮಾತನಾಡಿದ ದಿವಾಕರ ಶೆಟ್ಟಿ ರವರು ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿರುವ ಸುಮಾರು 750 ಕಟ್ಟಡಗಳಲ್ಲಿ ಈ ಸಂಘದ ಕಟ್ಟಡ ಉತ್ತಮ ಗುಣಮಟ್ಟದ ನಿರ್ಮಾಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ದ.ಕ. ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ರಾಮಕೃಷ್ಣ ಭಟ್, ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್, ವಿಸ್ತಾರಣಾಧಿಕಾರಿ ರಾಜೇಶ್ ಕಾಮಾತ್ ಪಿ., ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷರಾದ ಸಿರಿಲ್ ಪಿಂಟೊ, ನಿರ್ದೇಶಕರುಗಳಾದ ಕೇಶವ ಪೂಜಾರಿ ಕೆ., ಕುಶಾಲವತಿ, ಯೋಗಿನಿ, ನೇವಿಲ್ ಸ್ಟೀವನ್ ಮೊರಾಸ್., ಪ್ರವೀಣ್ ಪೂಜಾರಿ., ಗಿರಿಯಪ್ಪ ಗೌಡ ಕೆ., ವಸಂತ ನಾಯ್ಕ., ರಂಜನ್ ಹೆಚ್., ಗಂಗಯ್ಯ ಗೌಡ., ಮೋಹನ್ ದಾಸ್ ಶೆಟ್ಟಿ ಹಾಗೂ ರೇಖಾ ರುಕ್ಕಯ್ಯ ಉಪಸ್ಥಿತರಿದ್ದರು.


ಸಂಘದ ಕಾರ್ಯನಿರ್ವಣಾಧಿಕಾರಿ ಗುಲಾಬಿ ಹಾಗೂ ಸಿಬ್ಬಂದಿಗಳು ಭಾಗವಹಿಸಿ, ಸಹಕರಿಸಿದರು.

Leave a Comment

error: Content is protected !!