July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಮಕ್ಕಾದಲ್ಲಿ ನಿಧನ ಹೊಂದಿದ ಉಮ್ರಾ ಯಾರ್ತಾರ್ಥಿಯ ಅಂತ್ಯಸಂಸ್ಕಾರ‌ಕ್ಕೆ ನೇತೃತ್ವ ವಹಿಸಿದ ಕಿಲ್ಲೂರಿನ ಅಬ್ದುಲ್ ಅಝೀಝ್ ಝುಹುರಿ

ಬೆಳ್ತಂಗಡಿ: ಪವಿತ್ರ ಉಮ್ರಾ ನಿರ್ವಹಣೆಗಾಗಿ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಬುರಾಕ್ ಇಂಟರ್ನ್ಯಾಷನಲ್ ಟ್ರಾವೆಲ್ಸ್ ಮೂಲಕ ಸೌದಿ ಅರೇಬಿಯಾ ಕ್ಕೆ ಪ್ರಯಾಣ ಬೆಳೆಸಿದ್ದ ಉಳ್ಳಾಲ ತಾಲೂಕಿನ ಮದನಿ ನಗರ ನಿವಾಸಿ ಝುಬೈದ ಎಂಬವರು ಅಸೌಖ್ಯದಿಂದ ಆ. 17 ರಂದು ಪವಿತ್ರ ಮಕ್ಕಾದಲ್ಲಿ ಇಹಲೋಕ ತ್ಯಜಿಸಿದರು.

ಕುಟುಂಬದ ಇಚ್ಛೆಯಂತೆ ಮೃತರ ದಫನ ಕಾರ್ಯ ಮಕ್ಕಾದಲ್ಲೇ ನಿರ್ವಹಿಸುವುದಾಗಿ ತೀರ್ಮಾನಿಸಿ, ಉಮ್ರಾ ಗ್ರೂಪ್ ಲೀಡರ್ ಅಬ್ದುಲ್ ಅಝೀಝ್ ಝುಹ್‌ರಿ ಕಿಲ್ಲೂರು ರವರ ನೇತೃತ್ವದಲ್ಲಿ ಮಕ್ಕಾದಲ್ಲಿ ದಫನ ಮಾಡಲು ಬೇಕಾದ ಎಲ್ಲಾ ದಾಖಲೆ ಪತ್ರಗಳ ತಯಾರಿಗಾಗಿ ಸಮಾಜ ಸೇವಕ ಶಾಕಿರ್ ಹಕ್ ನೆಲ್ಯಾಡಿ ಯವರ ಮೂಲಕ ಕ್ಲಪ್ತ ಸಮಯಕ್ಕೆ ಸಂಗ್ರಹಿಸಲಾಯಿತು.

ನಂತರ ಭಾರತದ ಕಾನ್ಸುಲೇಟ್ ನಿಂದ NOC ದೊರಕಿದ ನಂತರ ಮೃತರ ದಫನ ಕಾರ್ಯವನ್ನು ಮಕ್ಕಾದ ಹರಮ್ ಪರಿಸರದಲ್ಲಿ ನೆರವೇರಿಸಲಾಯಿತು.

ದಾಖಲೆ ಪತ್ರಗಳ ಸಂಗ್ರಹಕ್ಕಾಗಿ ಶಾಕಿರ್ ಹಕ್ ರವರಿಗೆ ಮಂಗಳೂರು ಇಂಟರ್ ನ್ಯಾಷನಲ್ ಉಮ್ರಾ ಟ್ರಾವೆಲ್ಸ್ ನ ಮಾಲಕ ಹಾಜಿ ಅಬೂಬಕ್ಕರ್ ಅಡ್ಡೂರು ಹಾಗೂ ಹೆಚ್‌ಐಎಫ್ ನಾಯರಾದ ರಿಜ್ವಾನ್ ಪಾಂಡೇಶ್ವರ ನೆರವಾದರು.ನಂತರ ನಡೆದ ದಫನ ಪ್ರಕ್ರಿಯೆಯಲ್ಲಿ ಕೆ ಸಿ ಎಫ್ ನಾಯಕ ಮೂಸ ಹಾಜಿ ಕಿನ್ಯ , ರಝಕ್ ಮುಸ್ಲಿಯಾರ್ ರಂತಡ್ಕ, ಲತೀಫ್ ನೆಲ್ಯಾಡಿ, ಹುಸೈನ್ ನೆಲ್ಯಾಡಿ, ಇಕ್ಬಾಲ್ ಕಕ್ಕಿಂಜೆ, ಹನೀಫ್ ಕೋಳಿಯೂರ್, ಶಾಕಿರ್ ಹಕ್ ನೆಲ್ಯಾಡಿ, ರನೀಝ್ ಗೇರುಕಟ್ಟೆ, ಮೃತರ ಪತಿ ಇಸ್ಮಾಯಿಲ್ ಮತ್ತು ಮಕ್ಕಳು ಉಪಸ್ಥಿತರಿದ್ದರು.

Related posts

ನ್ಯಾಯ್ಯತರ್ಪು: ಮನೆಗಳಿಗೆ ಸಿಡಿಲು ಬಡಿದು ಹಾನಿ: ಸ್ಥಳಕ್ಕೆ ರಕ್ಷಿತ್ ಶಿವರಾಂ ಭೇಟಿ

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ವಾಣಿ ಕಾಲೇಜಿನಲ್ಲಿ ನಶಾಮುಕ್ತ ಭಾರತ -ಪ್ರತಿಜ್ಞಾವಿಧಿ ಸ್ವೀಕಾರ

Suddi Udaya

ಎಸ್.ಡಿ.ಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದ ಪ್ರಾಂಶುಪಾಲ ಡಾ| ಪ್ರಶಾಂತ್ ಶೆಟ್ಟಿ ಹಾಗೂ ಚಾರ್ಮಾಡಿ ಹಸನಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ

Suddi Udaya

ಜೂ.30ರಿಂದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಅಭಿಯಾನ ಆರಂಭ

Suddi Udaya

ಹದಗೆಟ್ಟ ಬಳ್ಳಮಂಜ ರಸ್ತೆ: ದುರಸ್ತಿಗೊಳಿಸುವಂತೆ ಮಡಂತ್ಯಾರು ಆಟೋ ಚಾಲಕ ಮಾಲಕರ ಸಂಘದಿಂದ ಒತ್ತಾಯ

Suddi Udaya
error: Content is protected !!