September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಮಕ್ಕಾದಲ್ಲಿ ನಿಧನ ಹೊಂದಿದ ಉಮ್ರಾ ಯಾರ್ತಾರ್ಥಿಯ ಅಂತ್ಯಸಂಸ್ಕಾರ‌ಕ್ಕೆ ನೇತೃತ್ವ ವಹಿಸಿದ ಕಿಲ್ಲೂರಿನ ಅಬ್ದುಲ್ ಅಝೀಝ್ ಝುಹುರಿ

ಬೆಳ್ತಂಗಡಿ: ಪವಿತ್ರ ಉಮ್ರಾ ನಿರ್ವಹಣೆಗಾಗಿ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಬುರಾಕ್ ಇಂಟರ್ನ್ಯಾಷನಲ್ ಟ್ರಾವೆಲ್ಸ್ ಮೂಲಕ ಸೌದಿ ಅರೇಬಿಯಾ ಕ್ಕೆ ಪ್ರಯಾಣ ಬೆಳೆಸಿದ್ದ ಉಳ್ಳಾಲ ತಾಲೂಕಿನ ಮದನಿ ನಗರ ನಿವಾಸಿ ಝುಬೈದ ಎಂಬವರು ಅಸೌಖ್ಯದಿಂದ ಆ. 17 ರಂದು ಪವಿತ್ರ ಮಕ್ಕಾದಲ್ಲಿ ಇಹಲೋಕ ತ್ಯಜಿಸಿದರು.

ಕುಟುಂಬದ ಇಚ್ಛೆಯಂತೆ ಮೃತರ ದಫನ ಕಾರ್ಯ ಮಕ್ಕಾದಲ್ಲೇ ನಿರ್ವಹಿಸುವುದಾಗಿ ತೀರ್ಮಾನಿಸಿ, ಉಮ್ರಾ ಗ್ರೂಪ್ ಲೀಡರ್ ಅಬ್ದುಲ್ ಅಝೀಝ್ ಝುಹ್‌ರಿ ಕಿಲ್ಲೂರು ರವರ ನೇತೃತ್ವದಲ್ಲಿ ಮಕ್ಕಾದಲ್ಲಿ ದಫನ ಮಾಡಲು ಬೇಕಾದ ಎಲ್ಲಾ ದಾಖಲೆ ಪತ್ರಗಳ ತಯಾರಿಗಾಗಿ ಸಮಾಜ ಸೇವಕ ಶಾಕಿರ್ ಹಕ್ ನೆಲ್ಯಾಡಿ ಯವರ ಮೂಲಕ ಕ್ಲಪ್ತ ಸಮಯಕ್ಕೆ ಸಂಗ್ರಹಿಸಲಾಯಿತು.

ನಂತರ ಭಾರತದ ಕಾನ್ಸುಲೇಟ್ ನಿಂದ NOC ದೊರಕಿದ ನಂತರ ಮೃತರ ದಫನ ಕಾರ್ಯವನ್ನು ಮಕ್ಕಾದ ಹರಮ್ ಪರಿಸರದಲ್ಲಿ ನೆರವೇರಿಸಲಾಯಿತು.

ದಾಖಲೆ ಪತ್ರಗಳ ಸಂಗ್ರಹಕ್ಕಾಗಿ ಶಾಕಿರ್ ಹಕ್ ರವರಿಗೆ ಮಂಗಳೂರು ಇಂಟರ್ ನ್ಯಾಷನಲ್ ಉಮ್ರಾ ಟ್ರಾವೆಲ್ಸ್ ನ ಮಾಲಕ ಹಾಜಿ ಅಬೂಬಕ್ಕರ್ ಅಡ್ಡೂರು ಹಾಗೂ ಹೆಚ್‌ಐಎಫ್ ನಾಯರಾದ ರಿಜ್ವಾನ್ ಪಾಂಡೇಶ್ವರ ನೆರವಾದರು.ನಂತರ ನಡೆದ ದಫನ ಪ್ರಕ್ರಿಯೆಯಲ್ಲಿ ಕೆ ಸಿ ಎಫ್ ನಾಯಕ ಮೂಸ ಹಾಜಿ ಕಿನ್ಯ , ರಝಕ್ ಮುಸ್ಲಿಯಾರ್ ರಂತಡ್ಕ, ಲತೀಫ್ ನೆಲ್ಯಾಡಿ, ಹುಸೈನ್ ನೆಲ್ಯಾಡಿ, ಇಕ್ಬಾಲ್ ಕಕ್ಕಿಂಜೆ, ಹನೀಫ್ ಕೋಳಿಯೂರ್, ಶಾಕಿರ್ ಹಕ್ ನೆಲ್ಯಾಡಿ, ರನೀಝ್ ಗೇರುಕಟ್ಟೆ, ಮೃತರ ಪತಿ ಇಸ್ಮಾಯಿಲ್ ಮತ್ತು ಮಕ್ಕಳು ಉಪಸ್ಥಿತರಿದ್ದರು.

Related posts

ಮೊಗ್ರು : ಮುಗೇರಡ್ಕ ದೈವಸ್ಥಾನ ವತಿಯಿಂದ ಮುಗೇರಡ್ಕ ಮುಳುಗು ಸೇತುವೆ ಸಂಚಾರಕ್ಕೆ ಮುಕ್ತ

Suddi Udaya

ಕಾಜೂರು ಉರೂಸ್ ಗೆ ಅದ್ದೂರಿ ಚಾಲನೆ

Suddi Udaya

ಪೆರ್ಲ ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ರಚನೆ

Suddi Udaya

ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆಯನ್ನು ಶೀಘ್ರ ದುರಸ್ತಿಗೆ ಆಗ್ರಹಿಸಿ ಎಸ್.ಡಿ.ಪಿ.ಐ ಪ್ರತಿಭಟನೆ

Suddi Udaya

ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದರೂ ಹಲವಾರು ಕುಟುಂಬಗಳಿಗೆ ಇನ್ನೂ ವಿದ್ಯುತ್ ಭಾಗ್ಯವಿಲ್ಲ: ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಅಳದಂಗಡಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಒತ್ತಾಯ

Suddi Udaya

ಕಡಿರುದ್ಯಾವರ: ಕುಚ್ಚೂರು ಬೈಲು ನಲ್ಲಿ ದ್ವಿತೀಯ ವರ್ಷದ ನಾಗಪ್ರತಿಷ್ಠೆ ವರ್ಷಾಚರಣೆ

Suddi Udaya
error: Content is protected !!