ಲಾಯಿಲ: 35ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಲಾಯಿಲ ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ 35 ನೇ ವರುಷದ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಆ.19ರಂದು ಸಂಜೆ 6.00 ಗಂಟೆಗೆ ಲಾಯಿಲಾದ ವಿಘ್ನೇಶ್ವರ ಕಲಾಮಂದಿರದಲ್ಲಿ ನೆರವೇರಿತು.

ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಲಾಯಿಲ ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕರಾದ ವೆ| ಮೂ| ಶ್ರೀ ಶ್ರೀನಿವಾಸ್ ಭಟ್ ರವರು ನೆರವೇರಿಸಿ ಶುಭ ಹಾರೈಸಿದರು.

ಪ್ರಧಾನ ಕಾರ್ಯದರ್ಶಿಗಳಾದ ರುಕ್ಮಯ ಕನ್ನಾಜೆ, ಅಧ್ಯಕ್ಷರಾದ ಅರವಿಂದ ಕುಮಾರ್ ರಾಘವೇಂದ್ರ ನಗರ, ಕಾರ್ಯದರ್ಶಿ ಗಣೇಶ್ ರಾಘವೇಂದ್ರ ನಗರ, ಕೋಶಾಧಿಕಾರಿ ಸುರೇಂದ್ರ ಎಲ್ ಜೆ, ಹಾಗೂ ಸಮಿತಿಯ ಸಲಹೆಗಾರರುಗಳು, ಪದಾಧಿಕಾರಿಗಳು, ಸದಸ್ಯರು, ಜೊತೆಗಿದ್ದರು.

ರುಕ್ಮಯ ಕನ್ನಾಜೆ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!