25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಡುಗೆ ಕೆಲಸಕ್ಕೆ ಹೋದ ಮುಂಡಾಜೆ ಕೂಳೂರು ಶಾರದಾ ನಗರ ನಿವಾಸಿ ರಾಘವೇಂದ್ರ ಮೆಹಂದಳೆ ನಾಪತ್ತೆ: ಪತ್ನಿಯಿಂದ ಪೊಲೀಸರಿಗೆ ದೂರು

ಮುಂಡಾಜೆ: ಇಲ್ಲಿಯ ದೇವಿ ಗುಡಿ ಬಳಿ ಕೂಳೂರು ಶಾರದಾ ನಗರ ನಿವಾಸಿ ರಾಘವೇಂದ್ರ ಮೆಹಂದಳೆ (32 ವರ್ಷ) ಅವರು ನಾಪತ್ತೆಯಾಗಿರುವುದಾಗಿ ಆ.21 ರಂದು ಧಮ೯ಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.

ರಾಘವೇಂದ್ರ ಮೆಹಂದಳೆ ಅವರ ಪತ್ನಿ ಶೀಲಾ ಈ‌ ದೂರನ್ನು ನೀಡಿದ್ದು, ಗಂಡ ರಾಘವೇಂದ್ರ ಮೆಹಂದಳೆ ರವರು ಬೆಳಗ್ಗೆ 9-30 ಗಂಟೆಗೆ ಎಂದಿನಂತೆ ಅಡುಗೆ ಕೆಲಸದ ಬಗ್ಗೆ ಬಾಲಕೃಷ್ಣ ಸಹಸ್ರ ಭುಧ್ಯೆ ಎಂಬವರಲ್ಲಿಗೆ ಹೋಗುತ್ತಿದ್ದು ಬಳಿಕ ಕಾರು ವಾಶ್ ಕೊಡುವ ಬಗ್ಗೆ ತಿಳಿಸಿದ್ದರು. ಬಳಿಕ ಕ್ಯಾಟರಿಂಗ್ ಕೆಲಸ ಇರುವುದರಿಂದ ಮನೆಗೆ ಬರುವರೇ ತಡವಾಗಬಹುದು ಎಂಬುದಾಗಿ ತಿಳಿಸಿ ಮನೆಯಿಂದ ಹೋದವರು ಸುಮಾರು 12-30 ಗಂಟೆಗೆ ತನ್ನ ಮೊಬೈಲ್ ಗೆ ಕರೆ ಮಾಡಿ, ನಾನು ತಡವಾಗಿ ಬರುತ್ತೆನೆ ಎಂಬ ಸಂದೇಶವನ್ನು ಕಳುಹಿಸಿರುತ್ತಾರೆ. ಮಧ್ಯಾಹ್ನ 3-30 ಗಂಟೆಗೆ ಬಾವ ವಿಶ್ವನಾಥ ಮೆಹಂದಳೆ. ಹಾಗೂ ಸ್ನೇಹಿತರಾದ ವಿಠ್ಠಲ್. ಮನೋಜ್. ರಾಘವೇಂದ್ರ ಭಟ್. ಇವರು ಮನೆಗೆ ಬಂದು ರಾಘವೇಂದ್ರ ಮೆಹಂದಳೆ ರವರ ಮೊಬೈಲ್ ಸ್ವಿಚ್ ಆಫ್ ಆಗಿರುವ ಬಗ್ಗೆ ತಿಳಿಸಿದ್ದು, ನಾನು ಕೂಡ ಗಂಡ ರಾಘವೇಂದ್ರ ಮೆಹಂದಳೆರವರ ಮೊಬೈಲ್ ಗೆ ಅನೇಕ ಸಲ ಕರೆ ಮಾಡಿದ್ದು ಮೋಬೈಲ್ ಸ್ವಿಚ್ ಆಫ್ ಆಗಿರುವುದು ಕಂಡು ಬಂದಿದೆ. ನಂತರ ನೆರೆಕೆರೆ ಹಾಗೂ ಸಂಬಂಧಿಕರ ಮನೆಗೆ ವಿಚಾರಿಸಿದ್ದಲ್ಲಿ ಎಲ್ಲಯೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಧಮ೯ಸ್ಥಳ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಭೇಟಿ

Suddi Udaya

ಅ.29: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಮದ್ದಡ್ಕದಲ್ಲಿ ಸ್ಕೂಟಿ ಹಾಗೂ ಆಪೆ ರಿಕ್ಷಾ ಡಿಕ್ಕಿ

Suddi Udaya

ವೇಣೂರು: ಪಡ್ಡಂದಡ್ಕ ನಿವಾಸಿ, ಹೋಟೆಲ್ ಉದ್ಯಮಿ ಹಂಝ ನಿಧನ

Suddi Udaya

ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭೀಷೇಕ ‘ಶ್ರೀಮುಖ ಪತ್ರಿಕೆ’ ಬಿಡುಗಡೆ

Suddi Udaya

ಹರಿದ್ವಾರ-ರಿಷಿಕೇಶ್ ಯಾತ್ರೆಯಲ್ಲಿ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

Suddi Udaya
error: Content is protected !!