22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಡುಗೆ ಕೆಲಸಕ್ಕೆ ಹೋದ ಮುಂಡಾಜೆ ಕೂಳೂರು ಶಾರದಾ ನಗರ ನಿವಾಸಿ ರಾಘವೇಂದ್ರ ಮೆಹಂದಳೆ ನಾಪತ್ತೆ: ಪತ್ನಿಯಿಂದ ಪೊಲೀಸರಿಗೆ ದೂರು

ಮುಂಡಾಜೆ: ಇಲ್ಲಿಯ ದೇವಿ ಗುಡಿ ಬಳಿ ಕೂಳೂರು ಶಾರದಾ ನಗರ ನಿವಾಸಿ ರಾಘವೇಂದ್ರ ಮೆಹಂದಳೆ (32 ವರ್ಷ) ಅವರು ನಾಪತ್ತೆಯಾಗಿರುವುದಾಗಿ ಆ.21 ರಂದು ಧಮ೯ಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.

ರಾಘವೇಂದ್ರ ಮೆಹಂದಳೆ ಅವರ ಪತ್ನಿ ಶೀಲಾ ಈ‌ ದೂರನ್ನು ನೀಡಿದ್ದು, ಗಂಡ ರಾಘವೇಂದ್ರ ಮೆಹಂದಳೆ ರವರು ಬೆಳಗ್ಗೆ 9-30 ಗಂಟೆಗೆ ಎಂದಿನಂತೆ ಅಡುಗೆ ಕೆಲಸದ ಬಗ್ಗೆ ಬಾಲಕೃಷ್ಣ ಸಹಸ್ರ ಭುಧ್ಯೆ ಎಂಬವರಲ್ಲಿಗೆ ಹೋಗುತ್ತಿದ್ದು ಬಳಿಕ ಕಾರು ವಾಶ್ ಕೊಡುವ ಬಗ್ಗೆ ತಿಳಿಸಿದ್ದರು. ಬಳಿಕ ಕ್ಯಾಟರಿಂಗ್ ಕೆಲಸ ಇರುವುದರಿಂದ ಮನೆಗೆ ಬರುವರೇ ತಡವಾಗಬಹುದು ಎಂಬುದಾಗಿ ತಿಳಿಸಿ ಮನೆಯಿಂದ ಹೋದವರು ಸುಮಾರು 12-30 ಗಂಟೆಗೆ ತನ್ನ ಮೊಬೈಲ್ ಗೆ ಕರೆ ಮಾಡಿ, ನಾನು ತಡವಾಗಿ ಬರುತ್ತೆನೆ ಎಂಬ ಸಂದೇಶವನ್ನು ಕಳುಹಿಸಿರುತ್ತಾರೆ. ಮಧ್ಯಾಹ್ನ 3-30 ಗಂಟೆಗೆ ಬಾವ ವಿಶ್ವನಾಥ ಮೆಹಂದಳೆ. ಹಾಗೂ ಸ್ನೇಹಿತರಾದ ವಿಠ್ಠಲ್. ಮನೋಜ್. ರಾಘವೇಂದ್ರ ಭಟ್. ಇವರು ಮನೆಗೆ ಬಂದು ರಾಘವೇಂದ್ರ ಮೆಹಂದಳೆ ರವರ ಮೊಬೈಲ್ ಸ್ವಿಚ್ ಆಫ್ ಆಗಿರುವ ಬಗ್ಗೆ ತಿಳಿಸಿದ್ದು, ನಾನು ಕೂಡ ಗಂಡ ರಾಘವೇಂದ್ರ ಮೆಹಂದಳೆರವರ ಮೊಬೈಲ್ ಗೆ ಅನೇಕ ಸಲ ಕರೆ ಮಾಡಿದ್ದು ಮೋಬೈಲ್ ಸ್ವಿಚ್ ಆಫ್ ಆಗಿರುವುದು ಕಂಡು ಬಂದಿದೆ. ನಂತರ ನೆರೆಕೆರೆ ಹಾಗೂ ಸಂಬಂಧಿಕರ ಮನೆಗೆ ವಿಚಾರಿಸಿದ್ದಲ್ಲಿ ಎಲ್ಲಯೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಧಮ೯ಸ್ಥಳ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ನಾಳೆಯಿಂದ ಬಂಡಾಜೆ ಜಲಪಾತ ವೀಕ್ಷಣೆಗೆ ಅವಕಾಶ

Suddi Udaya

ಪಣಕಜೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವದ ಸಮಿತಿ ರಚನೆ

Suddi Udaya

ಬಳಂಜ ಶಾಲೆಯ ಹಳೆ ವಿದ್ಯಾರ್ಥಿ ಪ್ರವೀಣ್ ಜೈನ್ ಅವರಿಗೆ ಡಾಕ್ಟರೇಟ್ ಪದವಿ

Suddi Udaya

ಪಟ್ಟೂರು ಕಾನೂನು ಬಾಹಿರ ಮನೆ ಜಪ್ತಿ : ತಪ್ಪಿತಸ್ತ ಅಧಿಕಾರಿ ಮೇಲೆ ಕ್ರಮಕ್ಕೆ ಮುಸ್ಲಿಂ ಒಕ್ಕೂಟ ಬೆಳ್ತಂಗಡಿ ಆಗ್ರಹ: ನೂತನ ಡಿವೈಎಸ್‌ಪಿ ಜೊತೆ ಮುಸ್ಲಿಂ ಮುಖಂಡರ ಮಾತುಕತೆ

Suddi Udaya

ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವ

Suddi Udaya

ಗಾಳಿ-ಮಳೆ: ಬೃಹತ್ ಮರ ಉರುಳಿ ಬಿದ್ದು, ಅಡಕೆ ಗಿಡಗಳು ಧರಾಶಾಹಿ

Suddi Udaya
error: Content is protected !!