23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಡುಗೆ ಕೆಲಸಕ್ಕೆ ಹೋದ ಮುಂಡಾಜೆ ಕೂಳೂರು ಶಾರದಾ ನಗರ ನಿವಾಸಿ ರಾಘವೇಂದ್ರ ಮೆಹಂದಳೆ ನಾಪತ್ತೆ: ಪತ್ನಿಯಿಂದ ಪೊಲೀಸರಿಗೆ ದೂರು

ಮುಂಡಾಜೆ: ಇಲ್ಲಿಯ ದೇವಿ ಗುಡಿ ಬಳಿ ಕೂಳೂರು ಶಾರದಾ ನಗರ ನಿವಾಸಿ ರಾಘವೇಂದ್ರ ಮೆಹಂದಳೆ (32 ವರ್ಷ) ಅವರು ನಾಪತ್ತೆಯಾಗಿರುವುದಾಗಿ ಆ.21 ರಂದು ಧಮ೯ಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.

ರಾಘವೇಂದ್ರ ಮೆಹಂದಳೆ ಅವರ ಪತ್ನಿ ಶೀಲಾ ಈ‌ ದೂರನ್ನು ನೀಡಿದ್ದು, ಗಂಡ ರಾಘವೇಂದ್ರ ಮೆಹಂದಳೆ ರವರು ಬೆಳಗ್ಗೆ 9-30 ಗಂಟೆಗೆ ಎಂದಿನಂತೆ ಅಡುಗೆ ಕೆಲಸದ ಬಗ್ಗೆ ಬಾಲಕೃಷ್ಣ ಸಹಸ್ರ ಭುಧ್ಯೆ ಎಂಬವರಲ್ಲಿಗೆ ಹೋಗುತ್ತಿದ್ದು ಬಳಿಕ ಕಾರು ವಾಶ್ ಕೊಡುವ ಬಗ್ಗೆ ತಿಳಿಸಿದ್ದರು. ಬಳಿಕ ಕ್ಯಾಟರಿಂಗ್ ಕೆಲಸ ಇರುವುದರಿಂದ ಮನೆಗೆ ಬರುವರೇ ತಡವಾಗಬಹುದು ಎಂಬುದಾಗಿ ತಿಳಿಸಿ ಮನೆಯಿಂದ ಹೋದವರು ಸುಮಾರು 12-30 ಗಂಟೆಗೆ ತನ್ನ ಮೊಬೈಲ್ ಗೆ ಕರೆ ಮಾಡಿ, ನಾನು ತಡವಾಗಿ ಬರುತ್ತೆನೆ ಎಂಬ ಸಂದೇಶವನ್ನು ಕಳುಹಿಸಿರುತ್ತಾರೆ. ಮಧ್ಯಾಹ್ನ 3-30 ಗಂಟೆಗೆ ಬಾವ ವಿಶ್ವನಾಥ ಮೆಹಂದಳೆ. ಹಾಗೂ ಸ್ನೇಹಿತರಾದ ವಿಠ್ಠಲ್. ಮನೋಜ್. ರಾಘವೇಂದ್ರ ಭಟ್. ಇವರು ಮನೆಗೆ ಬಂದು ರಾಘವೇಂದ್ರ ಮೆಹಂದಳೆ ರವರ ಮೊಬೈಲ್ ಸ್ವಿಚ್ ಆಫ್ ಆಗಿರುವ ಬಗ್ಗೆ ತಿಳಿಸಿದ್ದು, ನಾನು ಕೂಡ ಗಂಡ ರಾಘವೇಂದ್ರ ಮೆಹಂದಳೆರವರ ಮೊಬೈಲ್ ಗೆ ಅನೇಕ ಸಲ ಕರೆ ಮಾಡಿದ್ದು ಮೋಬೈಲ್ ಸ್ವಿಚ್ ಆಫ್ ಆಗಿರುವುದು ಕಂಡು ಬಂದಿದೆ. ನಂತರ ನೆರೆಕೆರೆ ಹಾಗೂ ಸಂಬಂಧಿಕರ ಮನೆಗೆ ವಿಚಾರಿಸಿದ್ದಲ್ಲಿ ಎಲ್ಲಯೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಧಮ೯ಸ್ಥಳ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಜಾರ್ಜ್ ಕೆ.ಡಿ. ರವರ ಕರ್ತವ್ಯಕ್ಕೆ ಎಸ್.ಪಿ. ಸುಧೀರ್ ಕುಮಾರ್ ರೆಡ್ಡಿ ಅವರಿಂದ ಶ್ಲಾಘನೆ

Suddi Udaya

ಬೆಳ್ತಂಗಡಿ: ನಿವೃತ್ತ ಮೆಸ್ಕಾಂ ಉದ್ಯೋಗಿ ಸಂಜೀವ ಶೆಟ್ಟಿ ನಿಧನ

Suddi Udaya

ವಾಣಿ ಪ.ಪೂ. ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜು ಆದರ್ಶ ವಿದ್ಯಾಲಯ: ಡಾ. ಸುಬ್ರಹ್ಮಣ್ಯ ಭಟ್

Suddi Udaya

ಉಜಿರೆ ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ದಾಖಲಾತಿ ಆರಂಭ

Suddi Udaya

ಕಲ್ಮಂಜ ಗ್ರಾಮ ಪಂಚಾಯತ್ ವತಿಯಿಂದ ನಿಡಿಗಲ್ ಪರಿಸರದ ಚರಂಡಿಗಳ ಸ್ವಚ್ಛತೆ

Suddi Udaya
error: Content is protected !!