ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಮನವಿಗೆ ಕೆಎಸ್ ಆರ್ ಟಿ ಸಿ ಸ್ಪಂದನೆ: ಆ.25 ಧರ್ಮಸ್ಥಳದಿಂದ ನಾರಾವಿಗೆ ಸರ್ಕಾರಿ ಬಸ್ ಪ್ರಾರಂಭ

Suddi Udaya

ಬೆಳ್ತಂಗಡಿ: ಕಳೆದ ಹಲವಾರು ವರ್ಷಗಳಿಂದ ನಾರಾವಿಗೆ ಸರ್ಕಾರಿ ಬಸ್ ಕಲ್ಪಿಸಬೇಕು ಎಂಬ ಜನರ ಬೇಡಿಕೆಯಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಮನವಿಗೆ ಕೆಎಸ್ ಆರ್ ಟಿ ಸಿ ಸ್ಪಂದಿಸಿದೆ.

ಆ.25 ರಂದು ಧರ್ಮಸ್ಥಳದಿಂದ ಬೆಳಿಗ್ಗೆ 6.35ಕ್ಕೆ ನಾರಾವಿಗೆ ಬಸ್ ಹೊರಡಲಿದ್ದು 7:00 ಗಂಟೆಗೆ ಬೆಳ್ತಂಗಡಿಗೆ, 07:40ಕ್ಕೆ ನಾರಾವಿ ಬಸ್ ನಿಲ್ದಾಣಕ್ಕೆ ತಲುಪಲಿದೆ. ಈ ಮೂಲಕ ಶಕ್ತಿ ಯೋಜನೆಗೆ ಸರ್ಕಾರ ಮತ್ತಷ್ಟು ಬಲ ನೀಡಿದ್ದು ಶಾಲಾ ಕಾಳೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ.

ಧರ್ಮಸ್ಥಳ: 6:35 ಬೆಳ್ತಂಗಡಿ :7:00 ನಾರಾವಿ: 7:40

ನಾರಾವಿ 7:45 ಬೆಳ್ತಂಗಡಿ : 8.30 ಧರ್ಮಸ್ಥಳ: 8.50

ಧರ್ಮಸ್ಥಳ 4.30 ಬೆಳ್ತಂಗಡಿ :5.00 ನಾರಾವಿ: 5.35

ನಾರಾವಿ :5.40 ಬೆಳ್ತಂಗಡಿ 6.15 ಧರ್ಮಸ್ಥಳ 6.45

Leave a Comment

error: Content is protected !!