‘ಮೃತ್ಯುಂಜಯ’ ಮೈರಲ್ಕೆ ಶ್ರೀ ಕಿರಾತಮೂರ್ತಿ ದೇವಸ್ಥಾನದ ಭಕ್ತಿ ಗೀತೆಯ ಪೋಸ್ಟರ್ ಬಿಡುಗಡೆ

Suddi Udaya

ಬೆಳ್ತಂಗಡಿ: ಮೃತ್ಯುಂಜಯ ಎನ್ನುವ ಮೈರಲ್ಕೆ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ಭಕ್ತಿ ಗೀತೆಯ ಪೋಸ್ಟರನ್ನು ಮೈರಲ್ಕೆ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದದಲ್ಲಿ ದೇವಸ್ಥಾನದದ ಪ್ರಧಾನ ಅರ್ಚಕರ ಸಮ್ಮುಖದಲ್ಲಿ ಆ.21 ರಂದು ಬಿಡುಗಡೆ ಮಾಡಲಾಯಿತು.


ಈ ಸಂದರ್ಭದಲ್ಲಿ ಮೈರಲ್ಕೆ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದದ ಪ್ರದಾನ ಅರ್ಚಕರಾದ ಪ್ರಸನ್ನ ಹೆಗಡೆ, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಗೋಪಾಲ ಶೆಟ್ಟಿ ಮತ್ತು ಕಾರ್ಯದರ್ಶಿ ವಿಮಲಾಕ್ಷ ಗೌಡ ಹಾಗೂ ಆಡಳಿತ ಮಂಡಳಿಯ ಮತ್ತು ಯುವ ಸಮಿತಿಯ ಎಲ್ಲಾ ಸರ್ವ ಸದಸ್ಯರು , ಹಾಗೂ ಮೈರಲ್ಕೆ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದದ ಭಜನಾ ಮಂಡಳಿಯ ಅಧ್ಯಕ್ಷರಾದ ಯೋಗೀಶ್ ಅಡ್ಡಕೊಡಂಗೆ ಹಾಗೂ ಎಲ್ಲಾ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.


ಭಕ್ತಿ ಗೀತೆಯ ನಿರ್ಮಾಣ ಚಿರಂಜೀವಿ ಶೆಟ್ಟಿ ನಾಳ, ಸಾಹಿತ್ಯ ಸುಮನ್ ಏರ್ಮೇತೋಡಿ, ಗಾಯನ ಜಯಶ್ರೀ ಬೆಳ್ತಂಗಡಿ ಮತ್ತು ಅಶ್ವಿನಿ ರವಿ ಕುಲಾಲ್, ಅಭಿನಯ ನಿರೀಕ್ಷಾ ವಿ ಗೌಡ ಮತ್ತು ಆಶ್ವಿತಾ ಗೌಡ, ಚಿತ್ರೀಕಣ ಅನೀಶ್ ನಾಯಕ್ ಮತ್ತು ತಂಡ, ಹಾಗೂ ಎಲ್ಲಾ ತಂಡದ ಸದಸ್ಯರು ಸಹಕರಿಸಿದರು.

Leave a Comment

error: Content is protected !!