ಕಂಡಿಗ ಗುತ್ತು ಶ್ರೀ ನಾಗಬ್ರಹ್ಮ ಸನ್ನಿದಿ ಹಾಗೂ ರಕ್ತೇಶ್ವರಿ ಕೊಡಮಣಿತ್ತಾಯ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ಚಾವಡಿ ಜೀರ್ಣೋದ್ಧಾರ ಸಮಿತಿ ರಚನೆ

Suddi Udaya

ಬೆಳ್ತಂಗಡಿ: ಬಂಟ್ವಾಳ ತಾಲ್ಲೂಕು ಮಧ್ವ, ಕಾವಳಪಡೂರು ಗ್ರಾಮದ ಕಂಡಿಗ ಗುತ್ತು ಶ್ರೀ ನಾಗಬ್ರಹ್ಮ ಸನ್ನಿದಿ ಹಾಗೂ ರಕ್ತೇಶ್ವರಿ ಕೊಡಮಣಿತ್ತಾಯ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ಚಾವಡಿ ಪುನರ್ ನವೀಕರಣಗೊಳಿಸಲು ನಾಗರಪಂಚಮಿಯ ಶುಭ ದಿನದಂದು ಕುಟುಂಬಸ್ಥರು ತೀರ್ಮಾನಿಸಿ ಜೀರ್ಣೋದ್ಧಾರ ಸಮಿತಿ ರಚನೆ ಮಾಡಲಾಯಿತು.

ಅಧ್ಯಕ್ಶರಾಗಿ ಹಿರಿಯರಾದ ತುಂಗಪ್ಪ ಪೂಜಾರಿ ಕಾಜೂರು, ಕಾರ್ಯದರ್ಶಿಯಾಗಿ ಪ್ರವೀಣ್ ಕೋಡ್ಯೇಲ್ ಮುಂಡೂರು , ಉಪಾಧ್ಯಕ್ಷರಾಗಿ ಸುಂದರ ಪೂಜಾರಿ ಕನಡಮಜಲು ಮತ್ತು ಶ್ರೀಧರ ಪೂಜಾರಿ ಉಜಿರೆ, ಕೋಶಾಧಿಕಾರಿಯಾಗಿ ಜಗನ್ನಾಥ್ ಶಿರ್ಲಾಲ್, ಜೊತೆ ಕಾರ್ಯದರ್ಶಿಯಾಗಿ ದೇವರಾಜ್ ಕಂಡಿಗ ಮತ್ತು ರಾಜೇಶ್ ಕೊಳಕೆಬೈಲ್, ಸಂಚಾಲಕರಾಗಿ ಕೀರ್ತಿ, ಕಿರಣ್ ಹಾಗೂ ಕುಟುಂಬದ ಇತರ ಸದಸ್ಯರನ್ನು ಸಂಘಟನಾ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳನ್ನು, ಗೌರವ ಸಲಹೆಗಾರರನ್ನು ಆಯ್ಕೆಮಾಡಲಾಯಿತು.

ಮುಂದೆ ನಡೆಯುವ ಜೀರ್ಣೋದ್ಧಾರ ಕೆಲಸ ಕಾರ್ಯಗಳಿಗೆ ಎಲ್ಲರ ಸಹಕಾರ ಕೋರಲಾಯಿತು.

Leave a Comment

error: Content is protected !!