ಕೊಯ್ಯೂರು ಶ್ರೀ ಪಂಚದುರ್ಗ ಪರಮೇಶ್ವರಿ ಯಕ್ಷಗಾನ ಸಂಘ ಹಾಗೂ ದಿ. ಹೊನ್ನಪ್ಪ ಗೌಡರ ಅಭಿಮಾನಿ ಬಳಗದಿಂದ ಯಕ್ಷಗಾನ ತಾಳಮದ್ದಳೆ ಮತ್ತು ನುಡಿ ನಮನ ಕಾರ್ಯಕ್ರಮ

Suddi Udaya

ಕೊಯ್ಯೂರು ಶ್ರೀ ಪಂಚದುರ್ಗ ಪರಮೇಶ್ವರಿ ಯಕ್ಷಗಾನ ಸಂಘ ಆದೂರು ಪೇರಾಲ್ ಹಾಗೂ ದಿ. ಹೊನ್ನಪ್ಪ ಗೌಡರ ಅಭಿಮಾನಿ ಬಳಗ ಇವರ ವತಿಯಿಂದ ಆದೂರು ಪೇರಾಲ್ ಸಹಕಾರಿ ಭವನದಲ್ಲಿ ಆ. 26 ರಂದು ಯಕ್ಷಗಾನ ತಾಳಮದ್ದಳೆ ಮತ್ತು ನುಡಿ ನಮನ ಕಾರ್ಯಕ್ರಮ ನಡೆಯಿತು.

ಪ್ರಾರಂಭದಲ್ಲಿ ಬೆಳಿಗ್ಗೆ 10.00ರಿಂದ 1.00 ಗಂಟೆವರೆಗೆಯಕ್ಷಗಾನ ತಾಳಮದ್ದಳೆ ಅತಿಕಾಯ ಮೋಕ್ಷ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ನಿವಾಸ ಗೌಡ ಬಳ್ಳಮಂಜ, ಉಮೇಶ್ ಆಚಾರ್ಯ ಕೋಡಿಯೇಲು, ಚೆಂಡೆಯಲ್ಲಿ ಶ್ರೇಯಸ್ ಪಾಳಂದೆ, ಮದ್ದಳೆಯಲ್ಲಿ ಗಣೇಶ ಭಟ್ ,ಚಕ್ರ ತಾಳದಲ್ಲಿ ವಿಶ್ವನಾಥ ಪಾಂಬೇಲು ಪಾಲ್ಗೊಂಡರು, ಪಾತ್ರವರ್ಗದಲ್ಲಿ ರಾಮನಾಗಿ ನಾರಾಯಣ ಭಟ್ ಬಾಸಮೆ , ಲಕ್ಷ್ಮಣನಾಗಿ ಪ್ರಸಾದ್ ಸವಣೂರು, ರಾವಣನಾಗಿ ಕೊಳ್ತಿಗೆ ನಾರಾಯಣ ಗೌಡ, ಅತಿಕಾಯ ನಾಗಿ ಗುಡ್ಡಪ್ಪ ಬಲ್ಯ, ವಿಭೀಷ ಣ ನಾಗಿ ಶ್ರೀ ವಿಜಯಕುಮಾರ್ ಎಂ., ಕೊಯ್ಯೂರು ಪಾತ್ರಗಳನ್ನು ನಿರ್ವಹಿಸಿದರು.

Leave a Comment

error: Content is protected !!