ನಾಲ್ಕೂರು: ಸೂಳಬೆಟ್ಟು ಶ್ರೀ ಕೃಷ್ಣ ಕುಣಿತ ಭಜನಾ ಮಂಡಳಿ ಸದಸ್ಯರಿಗೆ ಸಮವಸ್ತ್ರ ವಿತರಣೆ

Suddi Udaya

ನಾಲ್ಕೂರು: ಸೂಳಬೆಟ್ಟು ಶ್ರೀ ಕೃಷ್ಣ ಕುಣಿತ ಭಜನಾ ಮಂಡಳಿ ಇದರ ಸದಸ್ಯರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮವು ಸೂಳಬೆಟ್ಟು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷರಾಗಿ ನಿರಂಜನ ಜೋಷಿ ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು ವಹಿಕೊಂಡು ಭಜನಾ ಮಂಡಳಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು. ಮುಖ್ಯ ಅಥಿತಿಗಳಾಗಿ ಮದ್ದಡ್ಕ ಭಜನಾ ತರಬೇತುದಾರ ಸಂದೇಶ್ ಸೂಳಬೆಟ್ಟು ಭಜನಾ ಮಂಡಳಿ ವ್ಯವಸ್ಥಪಕ ಪ್ರಮೋದ್ ಪೂಜಾರಿ ,. ಕರುಣಾಕರ ಹೆಗ್ಡೆ ಬೊಕ್ಕಸ, ನಾಲ್ಕೂರು ಗ್ರಾಮದ ಸೇವಾಪ್ರತಿನಿದಿ ಸರಸ್ವತಿ. ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷೆ ವನಿತಾ . ಸಮವಸ್ತ್ರ ದಾನಿಗಳಾದ ವಸುಂಧರ ಮರಾಠೆ, ಜಯಶ್ರೀ ಹಾಗೂ ಎಲ್ಲಾ ಸದಸ್ಯರ ಪೋಷಕರು ಭಾಗವಹಿಸಿದರು.

Leave a Comment

error: Content is protected !!