ಗರ್ಡಾಡಿ: ಕಳೆದ ಹಲವಾರು ವರ್ಷಗಳಿಂದ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿರುವ ಯುವಕ ಮಂಡಲ ಗರ್ಡಾಡಿ ವತಿಯಿಂದ ಶ್ರೀ ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ೩೪ನೇ ವರ್ಷದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮ ಸೆ.೬ ರಂದು ನಡೆಯಲಿದೆ.
ಇದರ ಅಧ್ಯಕ್ಷರಾಗಿ ಹರೀಶ್ ಪೂಜಾರಿ ಬರಮೇಲು, ಗೌರವಾಧ್ಯಕ್ಷರಾಗಿ ಲಿಯೋ ಸಿಕ್ವೇರಾ, ಕಾರ್ಯದರ್ಶಿಯಾಗಿ ನರೇಂದ್ರ ಕುಮಾರ್, ಉಪಾಧ್ಯಕ್ಷರಾಗಿ ಸಂಕೇತ್ ಶಾಂತಿಬೆಟ್ಟು, ಜೊತೆಕಾರ್ಯದರ್ಶಿಯಾಗಿ ಸಾಗರ್ ಪೂಜಾರಿ ಆಯ್ಕೆಯಾಗಿದ್ದಾರೆ.