ಬೆದ್ರಬೆಟ್ಟು ಹಾ.ಉ.ಸ. ಸಂಘದ ವಾರ್ಷಿಕ ಮಹಾಸಭೆ

Suddi Udaya

ಇಂದಬೆಟ್ಟು: ಹಾಲು ಉತ್ಪಾದಕರ ಸಹಕಾರ ಸಂಘ ಬೆದ್ರಬೆಟ್ಟು ಇದರ ವಾರ್ಷಿಕ ಮಹಾಸಭೆಯು ಸಂಘದ ನೂತನ ಅಧ್ಯಕ್ಷರಾದ ಕೆ. ಚಂದ್ರಶೇಖರ್ ಕಾಂಜಾನು ಹಾಗೂ ಕಾರ್ಯದರ್ಶಿ ಶ್ರೀಮತಿ ರೇಖಮ್ಮ ರವರ ನೇತೃತ್ವದಲ್ಲಿ ಆ.29 ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಬೆದ್ರಬೆಟ್ಟು ಪಶುವೈದ್ಯ ಅಧಿಕಾರಿ ಡಾ. ಪ್ರಶಾಂತ್, ಒಕ್ಕೂಟದ ವೈಧ್ಯಾಧಿಕಾರಿ ಗಣಪತಿ ಭಟ್ ಹಾಗೂ ಕೆ.ಎಮ್.ಎಫ್ ವಿಸ್ತರಣಾ ಅಧಿಕಾರಿ ಶ್ರೀಮತಿ ಯಮುನಾ ಭಾಗವಹಿಸಿ ಹೈನುಗಾರಿಕೆ ಬಗ್ಗೆ ಹಾಗೂ ಇತರ ವಿಷಯಗಳ ಬಗ್ಗೆ ಸೂಕ್ತ ಸಲಹೆ ಸೂಚನೆ ಯನ್ನು ನೀಡಿದರು.

ಸಭೆಯಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು, ನಿರ್ದೇಶಕರು, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!