ಬಿಷಪ್ ಲಾರೆನ್ಸ್ ಮುಕ್ಕುಯಿರವರಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಿಂದ ಗೌರವಾಭಿನಂದನೆ

Suddi Udaya

ಬೆಳ್ತಂಗಡಿ: ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಬೆಳ್ಳಿಹಬ್ಬ ವರ್ಷ ಆಚರಿಸಿಕೊಳ್ಳುತ್ತಿರುವ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರಿಗೆ ಇಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ವತಿಯಿಂದ ಗೌರವಾಭಿನಂದನೆ ಸಲ್ಲಿಸಲಾಯಿತು. ಹಾಗೂ ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅವರಿಗೆ ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರಾದ ಸತೀಶ್ ಕೆ ಬಂಗೇರ ,ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ಕೆ.ಎಮ್ ನಾಗೇಶ್ ಕುಮಾರ್ ಗೌಡ ಹಾಗೂ ಪಕ್ಷದ ಪ್ರಮುಖರಾದ ಭಗೀರಥ ಜಿ, ಸಂತೋಷ್ ಕುಮಾರ್ ,ಸೆಬಾಸ್ಟಿಯನ್ ಪಿ.ಟಿ ಕಳೆಂಜ, ಪ್ರದೀಪ್ ಕೆ.ಸಿ, ಪ್ರವೀಣ್ ಹಳ್ಳಿಮನೆ, ಅನಿಲ್ ಮಾಟ್ಲಾ ,ಜೈಸನ್ ಪಟ್ಲೇರಿ,ನಮಿತ ಪೂಜಾರಿ ,ಪದ್ಮನಾಭ ಸಾಲಿಯಾನ್ ,ಜೋಸೆಫ್ ಕೆ.ಜೆ , ಹಕಿಂ ಕೊಕ್ಕಡ, ಸಚಿನ್ ನೂಜೋಡಿ, ಸೀರಜ್ ಚಿಲಿಂಬಿ,ಹರೀಶ್ ಸಾಲಿಯಾನ್, ಜಾರ್ಜ್ ಎಮ್ ವಿ,ಸೆಬಾಸ್ಟಿಯನ್ ವಿ.ಟಿ,ಶ್ರೀಮತಿ ಸೌಮ್ಯ ಲಾಯಿಲ,ಧನಂಜಯ ರಾವ್ ,ಶ್ರೀಮತಿ ಶಿಲ್ಪ , ಶ್ರೀದರ್ ಭಟ್ ಕಳೆಂಜ,ಕಲಂದರ್ ಕೊಕ್ಕಡ,ಸೆಬಾಸ್ಟಿಯನ್ ನಾವೂರು,ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Comment

error: Content is protected !!