ಚಾರ್ಮಾಡಿ ಸ. ಉ. ಪ್ರಾ. ಶಾಲೆಯಲ್ಲಿ ವಲಯ ಮಟ್ಟದ ಕಬಡ್ಡಿ ಪಂದ್ಯಾಟ

Suddi Udaya

ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ, ಬೆಳ್ತಂಗಡಿ ಸಮೂಹ ಸಂಪನ್ಮೂಲ ಕೇಂದ್ರ ಅಣಿಯೂರು ಕಕ್ಕಿಂಜೆ,ಮುಂಡಾಜೆ, ಹಳೆಪೇಟೆ ಉಜಿರೆ ಇದರ ಸಹಭಾಗಿತ್ವದಲ್ಲಿ ವಲಯ ಮಟ್ಟದ ಕಬಡ್ಡಿ ಪಂದ್ಯಾಟವು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಚಾರ್ಮಾಡಿ ಶಾಲಾ ಮೈದಾನದಲ್ಲಿ ಮುಂಡಾಜೆ- ಅಣಿಯೂರು ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಶಾಂತ್ ಪೂಜಾರಿ ಉದ್ಘಾಟಿಸಿದರು.


ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ದಿನೇಶ್ ಚಾರ್ಮಾಡಿ, ಚಾರ್ಮಾಡಿ ಗ್ರಾ. ಪಂ ಸದಸ್ಯರು ನಾಗೇಶ್ ಚಾರ್ಮಾಡಿ ಮತ್ತು ಆಯಿಷಾ ಬೇಗಂ, ಬಂಗಾಡಿ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ರಮೇಶ್, ಉಜಿರೆ ವಲಯ ಕ್ರೀಡಾ ಸಂಯೋಜಕರು ದೇವಸ್ಯ ಸಿ.ಎ, ಚಾರ್ಮಾಡಿ ಶಾಲಾ ದೈಹಿಕ ಶಿಕ್ಷಕಿ ಹರಿಣಾಕ್ಷಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಹಶಿಕ್ಷಕಿ ಮಂಜುಳ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕರು ಹುಚ್ಚವೀರಯ್ಯ ಸ್ವಾಗತಿಸಿ, ಸಹಶಿಕ್ಷಕರು ಚಂದ್ರಪ್ಪ ಧನ್ಯವಾದವಿತ್ತರು.

Leave a Comment

error: Content is protected !!