22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ನಿಟ್ಟಡೆ: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳ ತರಬೇತಿ

ನಿಟ್ಟಡೆ: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ-ಕಾಲೇಜಿನಲ್ಲಿ ಬರೀ ಶಿಕ್ಷಣಕ್ಕೆ ಮಾತ್ರ ಮಹತ್ವವನ್ನು ನೀಡುವುದಲ್ಲದೆ, ಪಠ್ಯೇತರ ಚಟುವಟಿಕೆಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದ್ದು, ಪ್ರತಿ ವಾರದಲ್ಲಿ ಒಂದು ದಿನ ಕರಾಟೆ, ಯೋಗಾಸನ, ಸಂಗೀತ, ಡ್ಯಾನ್ಸ್, ಯಕ್ಷಗಾನ ತರಬೇತಿಗಳನ್ನು ನುರಿತ ತರಬೇತುದಾರರಿಂದ ನೀಡಲಾಗುತ್ತಿದೆ.

ಅದೇ ರೀತಿ ಶಾಲಾ ಸಂಚಾಲಕ ಗಿರೀಶ್ ಕೆ.ಹೆಚ್. ಕಾರ್ಯನಿರ್ವಾಹಣಾಧಿಕಾರಿ ಅಶ್ವಿತ್ ಕುಲಾಲ್ ರವರ ಮಾರ್ಗದರ್ಶನದಲ್ಲಿ ವಿಜ್ಞಾನ, ಪರಿಸರ, ಸಾಂಸ್ಕೃತಿಕ, ಗಣಿತ, ಎನ್‌ ಸಿಸಿ, ಸೇವಾದಳ ಹಲವಾರು ವಿಭಾಗಗಳಾಗಿ ವಿಂಗಡಿಸಲಾಯಿತು. ಆಯಾಯ ವಿಭಾಗಗಳಿಗೆ ನಾಯಕರನ್ನುಆಯ್ಕೆಮಾಡಿ, ಗುಂಪಿನ ಹೆಸರನ್ನುಚಾರ್ಟಿನ ಮೂಲಕ ಎಲ್ಲಾ ವಿದ್ಯಾರ್ಥಿಗಳ ಸಹಕಾರದಿಂದ ಉದ್ಘಾಟಿಸಲಾಯಿತು.

ವಿಭಾಗವಾರು ಶಿಕ್ಷಕರಾದಂತಹ ಗಣಿತ – ಶ್ವೇತ ಮತ್ತುಸಂಧ್ಯಾ, ವಿಜ್ಞಾನ- ವಿನಯ್ ಮತ್ತು ಸ್ವಾತಿ, ಎನ್‌ ಸಿಸಿ – ಸಂಗೀತ ಮತ್ತು ಮಧು, ಸೇವಾದಳ – ಶುಭ ಮತ್ತು ಪವಿತ್ರ, ಪರಿಸರ- ಸ್ವರ್ಣಲತಾ ಮತ್ತು ರೂಪಲತಾ, ಸಾಂಸ್ಕೃತಿಕ- ಸಪ್ನಾಜ್ ಮತ್ತುವೀಣಾ ಇವರು ಮಕ್ಕಳಿಗೆ ಪ್ರೋತ್ಸಾಹಿಸಿದರು .

Related posts

ಸಿ.ಎ ಪರೀಕ್ಷೆಯಲ್ಲಿ ಕುವೆಟ್ಟು ಮೇಗೇಶ್ ಯು. ಶೆಟ್ಟಿ ಉತ್ತೀರ್ಣ

Suddi Udaya

ವೇಣೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾರಂಭೋತ್ಸವ

Suddi Udaya

ರಾಷ್ಟೀಯ ನೆಟ್ ಬಾಲ್ ಪಂದ್ಯಾಟ: ಕರ್ನಾಟಕ ತಂಡದಲ್ಲಿ ಎಸ್ ಡಿ ಎಂ ಕಾಲೇಜಿನ ಕ್ರೀಡಾ ವಿದ್ಯಾರ್ಥಿಗಳು

Suddi Udaya

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ವತಿಯಿಂದ ಉಚಿತ ದಂತ ಚಿಕಿತ್ಸೆ ಮತ್ತು ಡೆಂಟಲ್ ಪಿಲ್ಲಿಂಗ್ಸ್ ಹಾಗೂ ವೀಲ್ ಚೇರ್ ವಿತರಣಾ ಕಾರ್ಯಕ್ರಮ

Suddi Udaya

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್ ಅವರನ್ನು ಅಭಿನಂದಿಸಿದ ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಯು.ಕೆ ಮುಹಮ್ಮದ್ ಹನೀಫ್

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಉಜಿರೆ ಅನುಗ್ರಹ ಆಂ.ಮಾ. ಪ್ರೌಢ ಶಾಲೆಗೆ 96.42% ಫಲಿತಾಂಶ

Suddi Udaya
error: Content is protected !!