ವೇಣೂರು: ನಿವೃತ್ತ ಶಿಕ್ಷಕರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಗೌರವಾರ್ಪಣೆ

Suddi Udaya

ವೇಣೂರು:ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿವೃತ್ತಿ ಗೊಂಡಿರುವ ಶಿಕ್ಷಕರಿಗೆ ಹಾಗೂ ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ವೃಂದವನ್ನು ಹಳೆ ವಿದ್ಯಾರ್ಥಿಗಳು ಹಾಗೂ ಯುವ ಸೇವಾ ಸಂಗಮ, ವೇಣೂರು ಲಯನ್ಸ್ ಕ್ಲಬ್ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಗೌರವಿಸಲಾಯಿತು.

ಅಧ್ಯಾಪಕರಾಗಿ ನಿವೃತ್ತಿ ಗೊಂಡಿರುವಂಥ ಶಶಿಪ್ರಭ,ವೇಣೂರು ಉಪನ್ಯಾಸಕರಾದ ಶಿವರಾಮ ಹೆಗ್ಡೆ,ವೇಣೂರು ಶಿಕ್ಷಕರಾದ ಶೀಲಾ ಎಸ್ ಹೆಗ್ಡೆ , ವೇಣೂರು ಶಿವರಾಮ ಹೆಗ್ಡೆ ಕರಿಮಣೆಲು,ನಿವೃತ್ತ ದೈಹಿಕ ಶಿಕ್ಷಕರಾದ ವಜ್ರ ಕುಮಾರ್ ಅಜೀರಿ ಇವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ವಿಶ್ವನಾಥ್ ಶೆಟ್ಟಿ,ಯುವ ಸೇವಾ ಸಂಗಮದ ಅಧ್ಯಕ್ಷರಾದ ವಿಜಯ ಗೌಡ,ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಸ್ ನಿರಂಜನ್, ಶ್ರೀಕಾಂತ್ ಉಡುಪ,ನಾಗೇಶ್ ಪೈ,ಪ್ರಕಾಶ್ ಪೈ,ಉಮೇಶ್ ಕುಲಾಲ್,ಸುವರ್ಣ ದೇವಾಡಿಗ ಉಪಸ್ಥಿತರಿದ್ದರು.

Leave a Comment

error: Content is protected !!