ಸೆ.10: ಬೆಳ್ತಂಗಡಿ ಮಹಿಳಾ ವೃಂದದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ: ಮಕ್ಕಳಿಗೆ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು

Suddi Udaya

ಬೆಳ್ತಂಗಡಿ ಮಹಿಳಾ ವೃಂದದ ವತಿಯಿಂದ ವರ್ಷಂಪ್ರತಿ ನಡೆಸುವ ಶ್ರೀ ಕೃಷ್ಣ ಜನ್ಮಾಷ್ಠಮಿಯು ಸೆ.10 ರಂದು ಮಹಿಳಾ ವೃಂದದಲ್ಲಿ ನಡೆಯಲಿದೆ.


ಮಕ್ಕಳಿಗೆ ಮುದ್ದುವೇಷ ಸ್ಪರ್ದೆ, ಬಾಲಕೃಷ್ಣ ವೇಷ ಸ್ಪರ್ಧೆ, ಕೃಷ್ಣ ಮತ್ತು ರಾಧೆ ವೇಷ ಸ್ಪರ್ಧೆ, ಭಗವದ್ಗೀತೆಯ ಧ್ಯಾನ ಶ್ಲೋಕದ ಮೊದಲ ೬ ಶ್ಲೋಕಗಳು, ಭಾಷಣ ಸ್ಪರ್ಧೆ, ಶಂಖ ಊದುವ ಸ್ಪರ್ಧೆ ಹಾಗೂ ವಿವಿಧ ಸ್ಪರ್ಧೆಗಳು ನಡೆಯಲಿದೆ ಎಂದು ಮಹಿಳಾ ವೃಂದದ ಅಧ್ಯಕ್ಷೆ ಆಶಾ ಸತೀಶ್ ತಿಳಿಸಿದ್ದಾರೆ.

Leave a Comment

error: Content is protected !!